ಇಂಡಿ: ತಾಲೂಕಿನ ಗುಬ್ಬೇವಾಡ- ಶಿರಗೂರ ರಸ್ತೆ ಹಾಗೂ ಅಹಿರಸಂಗ- ಲಚ್ಯಾಣ ರಸ್ತೆಗಳಲ್ಲಿ ಮಹಾರಾಷ್ಟ್ರದಿಂದ ದ್ವಿಚಕ್ರ ವಾಹನಗಳ ಮೇಲೆ ಕಳ್ಳಬಟ್ಟಿ ಸಾಗಾಟ ಮಾಡುತ್ತಿರುವಾಗ ಇಂಡಿ ಅಬಕಾರಿ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಶುಕ್ರವಾರ ದಾಳಿ ನಡೆಸಿದ ಸಿಬ್ಬಂದಿ ಹಂಜಗಿಯ ಲಕ್ಕಪ್ಪ ನಿಂಗಪ್ಪ ಪಾಯಕರ ಹಾಗೂ ಅಹಿರಸಂಗದ ಮಾಳಪ್ಪ ರೇವಪ್ಪ ಇಚ್ಚೂರ ಎಂಬುವವರಿಂದ 20 ಲೀ. ಕಳ್ಳಬಟ್ಟಿ, ಎರಡು ದ್ವಿಚಕ್ರವಾಹನ ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಅಬಕಾರಿ ನಿರೀಕ್ಷಕ ಎಂ.ಎಚ್. ಪಡಸಲಗಿ, ಇಂಡಿ ವಲಯದ ಅಬಕಾರಿ ಉಪನಿರೀಕ್ಷಕ ಎಸ್.ಎಂ. ಬಿರಾದಾರ ಅವರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಇಂಡಿ ವಲಯ ಅಬಕಾರಿ ಉಪನಿರೀಕ್ಷಕ ರಾಹುಲ್ ನಾಯಕ, ಸಿಬ್ಬಂದಿ ಎ.ಎಸ್. ಗೊಣಸಗಿ, ಎಸ್.ಎಸ್. ಕೊಡತೆ, ಎಸ್.ಟಿ.ದಳವಾಯಿ, ಶಿವಶಂಕರ ಗೊಟ್ಯಾಳ, ಮಂಜುನಾಥ ಬಡಿಗೇರ, ಜಿ.ಪಿ. ಕಟ್ಟಿಮನಿ ದಾಳಿಯಲ್ಲಿ ಪಾಲ್ಗೊಂಡಿದರು.