More

    ದೋಹಾ ಕತಾರ್​ನಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ನೂರಾರು ಮಂದಿಯಿಂದ ರಕ್ತದಾನ

    ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮವನ್ನು ದೂರದ ದೋಹಾ ಕತಾರ್​ನಲ್ಲೂ ಆಚರಿಸಲಾಗಿದ್ದು, ಆ ಪ್ರಯುಕ್ತ ನೂರಾರು ಮಂದಿ ರಕ್ತದಾನವನ್ನೂ ಮಾಡಿದ್ದಾರೆ. ದೋಹಾ ಕತಾರ್​ನ ಇಂಡಿಯನ್​ ಕಲ್ಚರಲ್​ ಸೆಂಟರ್​ (ಐಸಿಸಿ) ಅಶೋಕ ಹಾಲ್​ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ನಡೆದಿದೆ. ಐಸಿಸಿ ಜೊತೆ ಹಮಾದ್​ ಮೆಡಿಕಲ್ ಕಾರ್ಪೊರೇಷನ್​ ಈ ಶಿಬಿರಕ್ಕೆ ಸಹಯೋಗ ನೀಡಿತ್ತು.

    ದೋಹಾ ಕತಾರ್​ನಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಅವರು ಈ ರಕ್ತದಾನ ಶಿಬಿರವನ್ನು ಉದ್ಘಾಟಿಸಿದ್ದಾರೆ. ಅವರೊಂದಿಗೆ ಸಾರ್ವಜನಿಕ ಆರೋಗ್ಯ ಇಲಾಖೆ ನಿರ್ದೇಶಕ ಶೇಖ್​ ಮೊಹಮದ್ ಬಿನ್ ಹಮಾದ್ ಅಲ್​ ಥಾನಿ, ಮಿಸ್ಟರ್​ ಕ್ಸೇವಿಯರ್ ಧನರಾಜ್​ ಫಸ್ಟ್​ ಸೆಕ್ರೆಟರಿ ಮುಂತಾದವರು ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದಾರೆ. ಹಮಾದ್ ಬ್ಲಡ್ ಡಾನರ್ ಸೆಂಟರ್​​ನ ಡಾ.ಶರೊನ್ ಜಾಕೊಬ್, ನಸೀಮ್ ಮೆಡಿಕಲ್​ನ ಇಕ್ಬಾಲ್​ ಅಬ್ದುಲ್ ಅವರು ಇದಕ್ಕೆ ಪ್ರಾಯೋಜಕತ್ವ ವಹಿಸಿದ್ದರು. ನಲವತ್ತು ಸ್ವಯಂಸೇವಕರು ಈ ಶಿಬಿರದಲ್ಲಿ ಭಾಗವಹಿಸಿದ್ದರು.

    ದೋಹಾ ಕತಾರ್​ನಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ನೂರಾರು ಮಂದಿಯಿಂದ ರಕ್ತದಾನ

    ಈ ಬೃಹತ್ ರಕ್ತದಾನ ಶಿಬಿರಕ್ಕೆ 780 ದಾನಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಆ ಪೈಕಿ 590 ದಾನಕ್ಕೆ ಮುಂದಾಗಿದ್ದು ತಪಾಸಣೆ ಬಳಿಕ 496 ಮಂದಿ ದಾನಕ್ಕೆ ಅರ್ಹರಾಗಿದ್ದು, ಅವರಿಂದ ರಕ್ತವನ್ನು ಸ್ವೀಕರಿಸಲಾಗಿದೆ. ಐಸಿಸಿ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್, ಉಪಾಧ್ಯಕ್ಷ ಸುಬ್ರಹ್ಯಣ್ಯ ಹೆಬ್ಬಾಗಿಲು ಮುಂತಾದವರು ಇದನ್ನು ನಿರ್ವಹಿಸಿದ್ದು, ಪಿ.ಎನ್. ಬಾಬುರಾಜನ್​ ನೇತೃತ್ವ ವಹಿಸಿದ್ದರು.

    ದೋಹಾ ಕತಾರ್​ನಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ನೂರಾರು ಮಂದಿಯಿಂದ ರಕ್ತದಾನ

    ದೋಹಾ ಕತಾರ್​ನಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ನೂರಾರು ಮಂದಿಯಿಂದ ರಕ್ತದಾನ

    ರಾಜ್ಯದ ಇದೊಂದು ಜಿಲ್ಲೆ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಮಳೆ ಕುಂಠಿತ

    ಮದ್ವೆಯಾಗಿ 8 ವರ್ಷಗಳಾದ್ರೂ ಮಕ್ಕಳಾಗಿಲ್ಲ ಎಂದು ವಿಷ ಕುಡಿದ ಮಹಿಳೆ; 2 ದಿನ ಆಸ್ಪತ್ರೆಯಲ್ಲಿ ಒದ್ದಾಡಿ ಸಾವು…

    ಕಳೆದು ಹೋದ ಮೊಬೈಲ್​ಫೋನ್​ಗಾಗಿ ಗುಂಪು ಕಟ್ಟಿಕೊಂಡು ಬಂದು ಹಲ್ಲೆ; ಫೋನ್​ ಕಳ್ಕೊಂಡವನೊಬ್ಬ, ಪ್ರಾಣ ಕಳ್ಕೊಂಡಿದ್ದು ಮತ್ತೊಬ್ಬ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts