ಮೈಸೂರು: ಕಳೆದುಹೋದ ಮೊಬೈಲ್ಫೋನ್ ವಿಚಾರವಾಗಿ ಉಂಟಾದ ವಾಗ್ವಾದ ಗಲಾಟೆಗೆ ತಿರುಗಿ ಬಳಿಕ ಮತ್ತೊಬ್ಬ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೆ ತೆರಳಿದೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಲ್ಯಾಣಗಿರಿಯ ಯಾಸಿನ್ (21) ಎಂಬಾತನ ಕೊಲೆಯಾಗಿದೆ. ಮೊಹಮ್ಮದ್ ರಹೀಮ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೊಹಮ್ಮದ್ ರಹೀಮ್ ಕೆಲವು ದಿನಗಳ ಹಿಂದೆ ಮೊಬೈಲ್ಫೋನ್ ಕಳೆದುಕೊಂಡಿದ್ದು, ಸೆಕೆಂಡ್ಸ್ ಮೊಬೈಲ್ಫೋನ್ಗಾಗಿ ಹುಡುಕಾಟ ನಡೆಸುತ್ತಿದ್ದಾಗ ತನ್ನದೇ ಮೊಬೈಲ್ಫೋನ್ ಪತ್ತೆಯಾಗಿತ್ತು. ಈ ಸಂಬಂಧ ಮುಜಾಯಿದ್ ಎಂಬಾತನೊಂದಿಗೆ ವಾಗ್ವಾದ ನಡೆದಿದ್ದು, ಬಳಿಕ ಅದು ವಿಕೋಪಕ್ಕೆ ತೆರಳಿ ಗಲಾಟೆಗೆ ತೆರಳಿದೆ.
ಮುಜಾಯಿದ್ ಇದೇ ದ್ವೇಷಕ್ಕೆ ಸುಮಾರು 15 ಜನರೊಂದಿಗೆ ಗುಂಪು ಕಟ್ಟಿಕೊಂಡು ಬಂದಿದ್ದು, ರಹೀಮ್ ತನ್ನ ಸ್ನೇಹಿತ ಯಾಸಿನ್ ಜೊತೆಗಿರುವಾಗಲೇ ಮುಖಾಮುಖಿ ಆಗಿದೆ. ಈ ವೇಳೆ ನಡುರಸ್ತೆಯಲ್ಲೇ ಇಬ್ಬರಿಗೂ ಇರಿದ ಗುಂಪು ಅಲ್ಲಿಂದ ಪರಾರಿಯಾಗಿದೆ. ಪರಿಣಾಮವಾಗಿ ಮೊಬೈಲ್ಫೋನ್ ಕಳೆದುಕೊಂಡಿದ್ದ ರಹೀಮ್ ಗಂಭೀರವಾಗಿ ಗಾಯಗೊಂಡಿದ್ದಾರೆ, ಆತನ ಜೊತೆಗಿದ್ದ ಸ್ನೇಹಿತ ಯಾಸಿನ್ ಚಿಕಿತ್ಸೆ ಫಲಿಸದೆ ಪ್ರಾಣ ಕಳೆದುಕೊಂಡಿದ್ದಾನೆ. ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರನಟಿಗೆ ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ; ಬಳಿಕ ನಗ-ನಗದಿನೊಂದಿಗೆ ಪರಾರಿಯಾದ ರೌಡಿಯ ಅಣ್ಣ..
ಗಂಗಾನದಿಯಲ್ಲೊಂದು ಭಾರಿ ಶಾಕ್; 30ಕ್ಕೂ ಅಧಿಕ ಮಂದಿಗೆ ಗಾಯ, ಸುಮಾರು 20 ಜನ ನಾಪತ್ತೆ!