ತೀರ್ಥಹಳ್ಳಿ: ದಾನಿಗಳ ನೆರವು ಹಾಗೂ ಅಂಟಿಕೆ ಪಂಟಿಕೆ ಮೂಲಕ ಸಂಗ್ರಹಿಸಿದ ಹಣದಲ್ಲಿ ನಿರ್ಮಿಸಲಾದ ಸರ್ಕಾರಿ ಉನ್ನತೀಕರಿಸಿದ ಮೇಲಿನಕುರುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ಮುಖ ಮಂಟಪ ಸೇರಿದಂತೆ ವಿವೇಕ ಯೋಜನೆಯ ಶಾಲಾ ಕೊಠಡಿ ಉದ್ಘಾಟನೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಫೆ.24ರಂದು ಸಂಜೆ 4.30ಕ್ಕೆ ನೆರವೇರಿಸಲಾಗಿದೆ.
ವಿವೇಕ ಯೋಜನೆಯಡಿ 13.90ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಿಸಲಾಗಿದೆ. ದಾನಿಗಳ ನೆರವು ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ನೇತೃತ್ವದಲ್ಲಿ ಅಂಟಿಕೆ ಪಂಟಿಕೆ ಮೂಲಕ ಸಂಗ್ರಹಿಸಿದ ಅಂದಾಜು ಐದು ಲಕ್ಷ ರೂ. ಹಣದಲ್ಲಿ ಶಾಲೆಯ ಮುಂಭಾಗದಲ್ಲಿ ಆಕರ್ಷಕವಾದ ಮುಖ ಮಂಟಪವನ್ನು ನಿರ್ಮಿಸಲಾಗಿದ್ದು ಈ ಸರ್ಕಾರಿ ಶಾಲೆ ಕಾರ್ಪೋರೇಟ್ ಶಾಲೆಯಂತೆ ಕಂಗೊಳಿಸುತ್ತಿದೆ.
ಇಲ್ಲಿನ ವಿದ್ಯಾರ್ಥಿಗಳಿಗೆ ಆಧುನಿಕವಾದ ಪೀಠೋಪಕರಣ ಮತ್ತು ಆಟಿಕೆಗಳನ್ನು ಒದಗಿಸಲಾಗಿದೆ. ೫೦ ಸಾವಿರ ರೂ.ವೆಚ್ಚದಲ್ಲಿ ಶಾಲೆಯ ಕಾಂಪೌAಡ್ ಮೇಲೆ ತಾಲೂಕಿನ ಐತಿಹಾಸಿಕ ಘಟನೆಗಳ ಹಿನ್ನೆಲೆಯ ಗೋಡೆ ಬರಹವನ್ನು ಬರೆಸಲಾಗಿದೆ.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ತಮ್ಮ ಪಾಲಕರ ಹೆಸರಿನಲ್ಲಿ ೬ ಲಕ್ಷ ರೂ.ಗಳನ್ನು ವಿನಿಯೋಗಿಸಿ ಶಾಲಾ ಆವರಣದಲ್ಲಿ ಇಂಟರ್ ಲಾಕ್, ರಂಗಮAದಿರದ ಮುಂಭಾಗದ ಕಾಮಗಾರಿ, ಶಾಲೆಗೆ ಸುಣ್ಣಬಣ್ಣ ಮಾಡಿಸಿದ್ದಾರೆ. ಪಾಲಕರು ಖಾಸಗಿ ಶಾಲೆಗಳ ಮೇಲಿನ ಆಸಕ್ತಿಯ ನಡುವೆಯೂ ಸರ್ಕಾರಿ ಶಾಲೆ ಪಟ್ಟಣಕ್ಕೆ ಹೊಂದಿಕೊAಡಿದ್ದು ಆಂಗ್ಲ ಮಾಧ್ಯಮದ ಒಂದರಿAದ ಎಂಟನೇ ತರಗತಿವರೆಗಿನ ಈ ಸರ್ಕಾರಿ ಶಾಲೆ ಎಲ್ಲ ಆಧುನಿಕ ಸೌಲಭ್ಯ, ಶಿಕ್ಷಕರ ಕಾರ್ಯ ವೈಖರಿಯಿಂದಾಗಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.
ಮೇಲಿನಕುರುವಳ್ಳಿ ನವೀಕೃತ ಶಾಲೆ ಅನಾವರಣ

You Might Also Like
ಬೆಳಿಗ್ಗೆ ಎದ್ದಾಗ ಇವುಗಳನ್ನು ನೋಡಬೇಡಿ! ನಿಮ್ಮ ಇಡೀ ದಿನ ಚೆನ್ನಾಗಿರುತ್ತದೆ… Morning
Morning: ಬೆಳಿಗ್ಗೆ ಎದ್ದ ನಂತರ ಕೆಲವು ವಸ್ತುಗಳನ್ನು ನೋಡಿದರೆ, ಅದು ಇಡೀ ದಿನ ಅಶುಭಕರವಾಗಿರುತ್ತದೆ ಎಂದು…
ಖಾಲಿ ಹೊಟ್ಟೆಯಲ್ಲಿ ಒಂದು ಚಿಟಿಕೆ ಶುಂಠಿ ತಿಂದು, ಈ ಎಲ್ಲಾ ಸಮಸ್ಯೆಗಳಿಗೆ ಗುಡ್ ಬಾಯ್ ಹೇಳಿ | Ginger
Ginger: ಅಡುಗೆಯ ರುಚಿ ಹೆಚ್ಚಿಸಲು ನಾವು ವಿವಿಧ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತೇವೆ, ಅವುಗಳಲ್ಲಿ ಶುಂಠಿಯೂ…
ಸಣ್ಣ ಇರುವವರು ದಪ್ಪವಾಗಲು ಇಲ್ಲಿದೆ ಸುಲಭ ಮಾರ್ಗ: ಇಂತಹ ನ್ಯಾಚುರಲ್ ಆಹಾರ ಸೇವಿಸಿದ್ರೆ ಸಾಕು| Weight Gain
Weight Gain: ಸಾಮಾನ್ಯವಾಗಿ ದಪ್ಪಗಿರುವ ವ್ಯಕ್ತಿಗಳು ಸಣ್ಣದಾಗಲು ಕಷ್ಟ ಎಂದು ಬಹುತೇಕರು ಪರಿಗಣಿಸುತ್ತಾರೆ. ಆದರೆ, ಸಣಕಲು…