ಕೋಝಿಕ್ಕೋಡ್: ಅಪ್ಪ ಮಾಡಿದ ಪಾಪ ಕಾರ್ಯದ ಫಲ ಏಳು ತಲೆಮಾರಿಗೂ ಸುತ್ತಿಕೊಳ್ಳುತ್ತದೆಯಂತೆ- ಹಾಗಾಗಿದೆ ಕಾಂಗ್ರೆಸ್ನ ನೆಹರು-ಗಾಂಧಿ ಕುಟುಂಬದ ಕಥೆ-ವ್ಯಥೆ!
ಇಂಡಿಯನ್ ಸೋಷಿಯಾಲಜಿಸ್ಟ್ ಆಂದ್ರೆ ಬೆಟೆಲ್ ಅವರನ್ನು ಉಲ್ಲೇಖಿಸಿದ ಇತಿಹಾಸಕಾರ ರಾಮಚಂದ್ರ ಗುಹಾ, ನೆಹರು-ಗಾಂಧಿ ಕುಟುಂಬದ ಕಥೆಯನ್ನು ಕೇರಳ ಲಿಟ್ ಫೆಸ್ಟ್ನಲ್ಲಿ ವಿವರಿಸಿದ್ದು ಹೀಗೆ..
ನೆಹರುವಿನ ಪ್ರಕರಣದಲ್ಲಿ, ಅವರು ಮಾಡಿದ ತಪ್ಪುಗಳು, ಪ್ರಮಾದಗಳು ತಲೆಮಾರುಗಳವರೆಗೆ ಕಾಡಲಿದೆ. ಅಪ್ಪ ಮಾಡಿತ ತಪ್ಪು, ಪ್ರಮಾದಗಳ ಫಲವನ್ನು ಏಳು ತಲೆಮಾರುಗಳವರು ಉಣ್ಣಬೇಕಾಗುತ್ತದೆ ಎಂಬ ನುಡಿಯಂತೆ ಇದುಕೂಡ. ರಾಷ್ಟ್ರ ಮಷ್ಟದಲ್ಲಿ ನಡೆಯುವ ಚರ್ಚೆಗಳತ್ತ ಒಮ್ಮೆ ಗಮನಹರಿಸಿ. ಪ್ರತಿಬಾರಿಯೂ ನೆಹರು ಹೆಸರು ಉಲ್ಲೇಖಿಸಲ್ಪಡುತ್ತದೆ. ಮೋದಿ ಯಾಕೆ ಯಾವಾಗಲೂ ‘ನೆಹರೂ ಕಾಶ್ಮೀರದ ವಿಚಾರದಲ್ಲಿ ಹಾಗೆ ಮಾಡಿದ್ರು, ಚೀನಾದ ವಿಚಾರದಲ್ಲಿ ನೆಹರೂ ಹೀಗೆ ಮಾಡಿದ್ರು, ತ್ರಿವಳಿ ತಲಾಖ್ ವಿಚಾರದಲ್ಲಿ ಈ ನಿಲುವು ಹೊಂದಿದ್ರು… ‘ ಹೀಗೆ ಹೇಳುತ್ತಲೇ ಹೋಗುತ್ತಾರೆ. ಯಾಕೆ ಗೊತ್ತಾ ಅವರಿಗೆ ಪ್ರತಿಸ್ಪರ್ಧಿಯಾಗಿರುವುದು ರಾಹುಲ್ ಗಾಂಧಿ!
ಈಗ ಒಂದೊಮ್ಮೆ ರಾಹುಲ್ ಗಾಂಧಿ ಪ್ರತಿಸ್ಪರ್ಧಿಯಾಗಿ ಅಥವಾ ಎದುರಾಳಿಯಾಗಿ ರಾಜಕೀಯ ಕಣದಲ್ಲಿ ಇಲ್ಲದೇ ಹೋದರೆ, ಮೋದಿ ಯಾರನ್ನು ದೂಷಿಸುತ್ತಾರೆ? ಅವರು ಅವರದ್ದೇ ಆದ ನೀತಿಗಳ ವಿಚಾರವಾಗಿ ಮಾತನಾಡಬೇಕು. ಯಾಕೆ ವಿಫಲರಾದೆವು ಎಂಬುದನ್ನು ಜನರಿಗೆ ವಿವರಿಸಬೇಕು ಎಂದು ಗುಹಾ ವಿವರಿಸಿದರು. (ಏಜೆನ್ಸೀಸ್)