More

    ಭಾರತ ಹೆಚ್ಚೆಚ್ಚು ಪ್ರಜಾಪ್ರಭುತ್ವದತ್ತ ಹೊರಳುತ್ತಿದೆ, ಊಳಿಗಮಾನ್ಯ ಪದ್ಧತಿ ಕಡಿಮೆ ಆಗುತ್ತಿದ್ದು, ಕಾಂಗ್ರೆಸ್​ನ ಗಾಂಧಿಗಳಿಗೆ ಇದನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ : ರಾಮಚಂದ್ರ ಗುಹಾ

    ಕೋಝಿಕ್ಕೋಡ್: ಕಾಂಗ್ರೆಸ್​ ಪಕ್ಷದ ಸದ್ಯದ ಸ್ಥಿತಿಯನ್ನು ಗಮನಿಸುತ್ತಿದ್ದರೆ ಮೊಘಲ ಸಾಮ್ರಾಜ್ಯದ ಕೊನೆಗಾಲ ನೆನಪಾಗುತ್ತಿದೆ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೇರಳ ಲಿಟ್ರೇಚರ್ ಫೆಸ್ಟಿವಲ್​(ಕೆಎಲ್​ಎಫ್​)ನಲ್ಲಿ ಶುಕ್ರವಾರ ಮಾತನಾಡಿದ ಅವರು. ಭಾರತ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಪ್ರಜಾಪ್ರಭುತ್ವದ ಕಡೆಗೆ ವಾಲುತ್ತಿದೆ. ಊಳಿಗ ಮಾನ್ಯ ಪದ್ಧತಿ ಕಡಿಮೆಯಾಗುತ್ತಿದೆ. ಕಾಂಗ್ರೆಸ್ಸಿನ ಗಾಂಧಿಗಳಿಗೆ ಇದನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ ಎಂದು ಹೇಳಿದರು.

    ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಚುನಾಯಿಸಿ ಬಹುದೊಡ್ಡ ಪ್ರಮಾದವನ್ನೆಸಗಿದೆ ಕೇರಳ, 2024ರಲ್ಲಿ ಮತ್ತೆ ಅಂಥ ತಪ್ಪೆಸಗಬೇಡಿ: ಹೀಗೆಂದವರು ಯಾರೋ ಬಿಜೆಪಿ ಒಲವುಳ್ಳ ಇತಿಹಾಸಕಾರನಲ್ಲ!

    ನೀವು (ಸೋನಿಯಾ ಗಾಂಧಿ) ದೆಹಲಿಯಲ್ಲಿ ಇರುತ್ತೀರಿ. ನಿಮ್ಮ ಸಾಮ್ರಾಜ್ಯ ಕುಸಿಯುತ್ತಿದೆ. ಆದಾಗ್ಯೂ, ನಿಮ್ಮ ಚಮಚಾಗಳು ಮಾತ್ರ ನಿಮ್ಮ ಸತ್ಯವನ್ನು ಮರೆಮಾಚಿ, ನೀವೇ ಈಗಲೂ ಬಾದ್​ ಷಾ ಎಂದು ಹೇಳಿ ಅದನ್ನೇ ನಂಬುವಂತೆ ಮಾಡುತ್ತಿದ್ದಾರೆಂದು ಸೋನಿಯಾ ಗಾಂಧಿ ಅವರನ್ನು ಎಚ್ಚರಿಸಿದರು. (ಏಜೆನ್ಸೀಸ್) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts