More

    ಲಂಚ ಪಡೆದ ಶಿರಸ್ತೆದಾರ್ ಗೆ ಜೈಲು

    ಕಾರವಾರ:ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಶಿರಸ್ತೆದಾರ್ ಗೆ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ವಿಶೇಷ ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

    ಯಲ್ಲಾಪುರದ ತಹಸೀಲ್ದಾರ್ ಕಚೇರಿ ಶಿರಸ್ತೆದಾರ್ ವಿನಾಯಕ ಪಾಯ್ಕಾರಾಮ ಗಾಂವಕರ್ ಅವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.
    ಜಮೀನಿನ ವಾರಸಾ ಮಾಡಲು ಹಿತ್ಲಳ್ಳಿಯ ನಾಗೇಂದ್ರ ಶಿವರಾಮ ಹೆಗಡೆ ಅವರಿಂದ 1 ಸಾವಿರ ರೂ. ಲಂಚ ಪಡೆಯುವಾಗ ವಿನಾಯಕ ಗಾಂವಕರ್ ಲೋಕಾಯುಕ್ತ ಅಧಿಕಾರಿಗಳ ಬಳಿ ಸಿಕ್ಕಿ ಬಿದ್ದಿದ್ದರು.

    ಇದನ್ನೂ ಓದಿ:ಕಾಲ್ನಡಿಗೆಯಲ್ಲೇ ದೇಶ ಪರ್ಯಟನೆಗೆ ಹೊರಟ ಇಂಜಿನಿಯರ್‌

    ಲೋಕಾಯುಕ್ತ ಪರವಾಗಿ ಲಕ್ಷ್ಮೀಕಾಂತ ಪ್ರಭು ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts