ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮನೆಯಲ್ಲಿ ವಾರಕ್ಕೆ ಒಂದೆರಡು ಬಾರಿಯಾದರೂ ಪಾರ್ಟಿ ನಡೆಯುತ್ತಿತ್ತು. ಆಗೆಲ್ಲ ಸುಶಾಂತ್ ಮದ್ಯ ಅಥವಾ ಮಾದಕ ದ್ರವ್ಯ ಸೇವಿಸುತ್ತಿದ್ದ…!
ಸಾವಿಗೆ ಒಂದೆರಡು ದಿನಗಳ ಮುಂಚೆ ಆತನಿಗಾಗಿ ಗಾಂಜಾವನ್ನು ಸಿಗರೇಟ್ನಂತೆ ಸುರುಳಿ ಸುತ್ತಿ ಬಾಕ್ಸ್ನಲ್ಲಿಡಲಾಗಿತ್ತು. ಸಾವಿನ ನಂತರ ನೋಡಿದಾಗ ಅವು ಅಲ್ಲಿರಲಿಲ್ಲ ಎಂದು ಸುಶಾಂತ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ನೀರಜ್ ಸಿಂಗ್ ಹೇಳಿಕೆ ನೀಡಿದ್ದಾನೆ.
ಇದನ್ನೂ ಓದಿ; ಬಾಬ್ರಿ ಮಸೀದಿ ಧ್ವಂಸದ ತೀರ್ಪು ಸೆ.30 ರೊಳಗೆ ನೀಡಿ; ಸುಪ್ರೀಂ ಸೂಚನೆ; ಏನಾಗುತ್ತೆ ಅಡ್ವಾಣಿ, ಜೋಶಿ, ಕಲ್ಯಾಣ್ ಸಿಂಗ್ ಭವಿಷ್ಯ?
ಸುಶಾಂತ್ ಮ್ಯಾನೇಜರ್ ಆಗಿದ್ದ ಸ್ಯಾಮ್ಯುವೆಲ್ ಮಿರಾಂಡಾ, ರಜತ್ ಮೇವಾಠಿ, ಸಿದ್ಧಾರ್ಥ್ ಪೀಠಾಣಿ, ಆಯುಷ್, ಆನಂದಿ, ಸ್ಯಾಮ್ಯುವೆಲ್ ಹಾಕೀಫ್, ಅಶೋಕ್ ಖಾಸು ಹಾಗೂ ಕೇಶವ್ ಮೊದಲಾದವರೆಲ್ಲ ಸುಶಾಂತ್ಗಾಗಿ ಕೆಲಸ ಮಾಡುತ್ತಿದ್ದರು ಎಂದು ನೀರಜ್ ಹೇಳಿದ್ದಾನೆ.
ಸುಶಾಂತ್, ರಿಯಾ, ಆನಂದಿ ಮತ್ತು ಆಯುಷ್ ಮನೆಯಲ್ಲಿಯೇ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಸುಶಾಂತ್ ಮದ್ಯ ಹಾಗೂ ಗಾಂಜಾ ಸೇವಿಸುತ್ತಿದ್ದರು. ಸ್ಯಾಮ್ಯುವೆಲ್ ಜಾಕೋಬ್ ಅವರಿಗಾಗಿ ಗಾಂಜಾವನ್ನು ಸುರುಳಿ ಸುತ್ತಿ ಕೊಡುತ್ತಿದ್ದ. ಕೆಲವೊಮ್ಮೆ ನಾನೂ ಕೂಡ ಈ ಕೆಲಸ ಮಾಡುತ್ತಿದ್ದೆ. ಸಾವಿಗೆ ಮುನ್ನ ಮೂರು ದಿನಗಳವರೆಗೆ ಗಾಂಜಾ ಸುರುಳಿಗಳನ್ನು ಸುತ್ತಿ ಬಾಕ್ಸ್ನಲ್ಲಿಟ್ಟಿದೆ. ಆದರೆ, ಸಾವಿನ ನಂತರ ನೋಡಿದಾಗ ಆ ಬಾಕ್ಸ್ ಖಾಲಿಯಾಗಿತ್ತು ಎಂದು ನೀರಜ್ ಮುಂಬೈ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಇದನ್ನೂ ಓದಿ; ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ?
ಸುಶಾಂತ್ ಕೆಲ ದಿನಗಳ ಕಾಲ ರಿಯಾ ಮನೆಯಲ್ಲಿದ್ದರು. ಆ ಬಳಿಕ ಕೇಳೀದಾಗ ಸುಶಾಂತ್ ಸರ್ ಆಆರೋಗ್ಯ ಸರಿಯಿಲ್ಲ ಎಂದು ತನಗೆ ತಿಳಿಸಲಾಗಿತ್ತು ಎನ್ನುವುದು ನೀರಜ್ ಹೇಳಿಕೆ.
ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ