ಹಟ್ಟಿಚಿನ್ನದಗಣಿ: ಯೇಸು ಕ್ರಿಸ್ತರ ಮರಣವನ್ನು ಸೂಚಿಸುವ ಪವಿತ್ರ ಶುಭಶುಕ್ರವಾರ(ಗುಡ್ಫ್ರೈಡೆ) ಹಬ್ಬದ ನಿಮಿತ್ತ ಪಟ್ಟಣದ ವಿವಿಧ ಚರ್ಚ್ಗಳಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸಲಾಯಿತು.
ಧೂಳು, ಕಸ, ಸೆಗಣಿ, ಕೆಸರು, ಉಗುಳು, ಬೆವರು-ರಕ್ತಗಳಲ್ಲಿ ಮಿಂದು ಬಿಸಿಲಲ್ಲಿ ಬೆಂದು ಶೂಲದ ಪ್ರತಿಕವಾಗಿ ಸಾಧು ಸಜ್ಜನರು ಕಲ್ಪಿಸಿಕೊಳ್ಳಲು ಹೇಸುತ್ತಿರುವ ರೂಪಕವನ್ನು ಹಟ್ಟಿಪಟ್ಟಣದ ಮೆಥೋಡಿಸ್ಟ್ ಚರ್ಚ್ನಲ್ಲಿ ಮಕ್ಕಳು ಮಾಡಿದ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.