More

    ಪತ್ನಿಯನ್ನು ಕೊಂದು ಆಕೆಯ ಶವದ ಚಿತ್ರ ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕೊಂಡ ಪತಿ; ಆಮೇಲೆ ಮಾಡಿದ್ದೇನು?

    ಚಾಮರಾಜನಗರ: ಒಬ್ಬರನ್ನು ಕೊಲೆ ಮಾಡುವುದೇ ದೊಡ್ಡ ವಿಕೃತಿ. ಇನ್ನು ಕೊಲೆ ಮಾಡಿದ ಬಳಿಕ ವಿಕ್ಷಿಪ್ತವಾಗಿ ನಡೆದುಕೊಳ್ಳುವುದು, ಶವವನ್ನೂ ನೋಡಿ ಸಂಭ್ರಮಿಸುವುದು ಅದಕ್ಕಿಂತ ದೊಡ್ಡ ವಿಕೃತಿ. ಅಂಥದ್ದೊಂದು ವಿಕೃತ ಮನೋಭಾವವನ್ನು ಇಲ್ಲೊಬ್ಬ ಪತ್ನಿಯನ್ನು ಕೊಂದು ತೋರಿದ್ದಾನೆ.

    ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ಈ ಘಟನೆ ನಡೆದಿದೆ. ತಮಿಳುನಾಡಿ ಧರ್ಮಪುರಿ ಜಿಲ್ಲೆ ಎರಭಯ್ಯನಹಳ್ಳಿಯ ಮುನಿರಾಜು ಕೊಲೆ ಆರೋಪಿ. ಈತನ ಪತ್ನಿ ಲಕ್ಷ್ಮಿ ಕೊಲೆಯಾದ ಮಹಿಳೆ.

    ಇದನ್ನೂ ಓದಿ: 6 ಸೆಂ.ಮೀ. ಬಾಲದ ಜೊತೆಗೇ ಹುಟ್ಟಿದ ಹೆಣ್ಣು ಮಗು; ಶಸ್ತ್ರಚಿಕಿತ್ಸೆ ಯಶಸ್ವಿ

    ಈತ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಬಳಿಕ ಅವಳ ರಕ್ತಸಿಕ್ತ ಶವದ ಫೋಟೋವನ್ನು ತನ್ನ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಹಾಕಿಕೊಂಡಿದ್ದ. ನಂತರ ಈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಇದನ್ನೂ ಓದಿ: ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!

    ಲಕ್ಷ್ಮಿ ಪತಿಯನ್ನು ತೊರೆದು ಬಂದು ಪರಪುರುಷನೊಂದಿಗೆ ನಾಗಮಲೆಯಲ್ಲಿ ವಾಸವಾಗಿದ್ದಳು. ಇದರಿಂದ ಬೇಸತ್ತಿದ್ದ ಮುನಿರಾಜ್​ ನಾಗಮಲೆಗೇ ಬಂದು ಈ ಕೃತ್ಯವೆಸಗಿದ್ದಾನೆ. ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬರ್ತ್​ಡೇ ಪಾರ್ಟಿಯಲ್ಲಿ ಚಿತ್ರನಟನ ಮೇಲೆ ಹಲ್ಲೆ; ಆಡಿ ಕಾರಿನ ಗಾಜುಗಳು ಧ್ವಂಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts