ಚಂಡೀಗಢ: ಪ್ರೀತಿಸಿ, ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಕಾರಿಗಾಗಿ ಗಂಡನೇ ಆಕೆಯ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ತನುಜಾ ಗುರುಗ್ರಾಮದ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಖರ್ಖಡಿ ಗ್ರಾಮದ ಸಂದೀಪ್ ಜತೆ ಪ್ರೀತಿ ಹುಟ್ಟಿದೆ. ಆ ಪ್ರೀತಿಗೆ ಮನೆಯವರು ಒಪ್ಪಿಗೆ ನೀಡಿದ್ದು, 2020ರ ಮೇ 24ರಂದು ಮದುವೆ ಮಾಡಿಸಿದ್ದಾರೆ. ಆದರೆ ಮದುವೆಗೆ ಮೊದಲೇ ಸಂದೀಪ್, ತನುಜಾಳ ತಂದೆ ತಾಯಿ ಬಳಿ ಬೇಡಿಕೆ ಇಟ್ಟಿದ್ದನಂತೆ. ಕ್ರೆಟಾ ಕಾರು ಕೊಡಿಸಿ ಎಂದು ಕೇಳಿದ್ದನಂತೆ. ಆದರೆ ಕಷ್ಟದಲ್ಲಿದ್ದ ಕುಟುಂಬ, ಅಳಿಯನಿಗೆ ಕಾರು ಕೊಡಿಸಿಲ್ಲ.
ಅದಾದ ಮೇಲೆ ದಂಪತಿ ಚೆನ್ನಾಗಿಯೇ ಬದುಕುತ್ತಿದ್ದರು. ಮಾರ್ಚ್ 7ರಂದು ಸಂದೀಪ್, ಅತ್ತೆ ಮಾವನಿಗೆ ಕರೆ ಮಾಡಿ, ತನುಜಾ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ತಿಳಿಸಿದ್ದಾನೆ. ಅವರು ಆಸ್ಪತ್ರೆಗೆ ಬರುವಷ್ಟರಲ್ಲಿ ತನುಜಾ ಕೊನೆಯುಸಿರೆಳೆದಿದ್ದಾಳೆ. ಸಂದೀಪನೇ ಕಾರು ಕೊಡಿಸಿಲ್ಲವೆಂಬ ದ್ವೇಷಕ್ಕೆ ಆಕೆಯ ಕೊಲೆ ಮಾಡಿರುವುದಾಗಿ ಆಕೆಯ ಕುಟುಂಬ ದೂರಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸ್ ಪ್ರಕರಣ ದಾಖಲಾಗುತ್ತಿದ್ದಂತೆಯೇ ಸಂದೀಪ್ ಮತ್ತು ಆತನ ಕುಟುಂಬಸ್ಥರು ಪರಾರಿಯಾಗಿದ್ದು, ಅನುಮಾನ ಬಲವಾಗಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
‘ವೀಲ್ ಚೇರ್ ಮೇಲೆ ಕುಳಿತಾದರೂ ಪ್ರಚಾರ ಮಾಡ್ತೀನಿ’ ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ ಹರಿಬಿಟ್ಟ ದೀದಿ
ಸೆಕ್ಸ್ ಮಾಡದಿದ್ದರೂ ತಾಯಿಯಾದೆ! ವಿಚಿತ್ರ ಸನ್ನಿವೇಶದ ನೆನಪನ್ನು ಬಿಚ್ಚಿಟ್ಟ ಮಹಿಳೆ