More

    ಇಯರ್​ ಫೋನ್​ ಹಾಕಿಕೊಂಡೆ ರೈಲ್ವೆ ಹಳಿ ದಾಟಲು ಹೋದ ಮೌಲ್ವಿ; ನಂತರ ಆಗಿದ್ದು ದುರಂತ!

    ಹುಬ್ಬಳ್ಳಿ: ಇಯರ್​ ಫೋನ್​ ಹಾಕಿಕೊಂಡು ರೈಲು ಹಳಿ ದಾಟುತ್ತಿದ್ದ ಮೌಲ್ವಿಯೊಬ್ಬರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡದ ಶಕ್ತಿ ನಗರದಲ್ಲಿ ನಡೆದಿದೆ.

    ಶಕ್ತಿ ನಗರದ ಮಹಮ್ಮದ ರಿಯಾಜ್​ ಶೇಕ್​ (28) ಮೃತಪಟ್ಟ ವ್ಯಕ್ತಿ. ರಿಯಾಜ್​ ಶಕ್ತಿ ನಗರದಲ್ಲಿ ಪ್ರವಚನ ನೀಡಿ ವಾಪಸ್​ ಬರುತ್ತಿದ್ದರು. ಈ ವೇಳೆ ಇಯರ್​ ಫೋನ್ ಹಾಕಿಕೊಂಡು ರೈಲು ಹಳಿ ದಾಟಲು ಮುಂದಾಗಿದ್ದರು. ಇದೇ ವೇಳೆ ಏಕಾಏಕಿ ಬಂದ ರೈಲು ಡಿಕ್ಕಿ ಹೊಡೆದಿದೆ.

    ಸ್ಥಳಕ್ಕೆ ಹುಬ್ಬಳ್ಳಿ ರೈಲ್ವೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts