More

    ಬಾರ್​-ಮದ್ಯದಂಗಡಿ ಯಾವಾಗಿಂದ ಅತಿ ಅವಶ್ಯಕವಾಯಿತು?; ಸರ್ಕಾರಕ್ಕೆ ಬಿಜೆಪಿ ಶಾಸಕರಿಂದಲೇ ಪ್ರಶ್ನೆ

    ಧಾರಾವಾಡ: ಕರೊನಾ ಪ್ರಕರಣ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಾಗೂ ಕರೊನಾದಿಂದಾಗಿ ಸಾಯುತ್ತಿರುವವರ ಸಂಖ್ಯೆಯೂ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೈಟ್​-ವೀಕೆಂಡ್​ ಕರ್ಫ್ಯೂ ಹೇರಿದೆ. ಅದಾಗ್ಯೂ ಪರಿಸ್ಥಿತಿ ಹಿಡಿತಕ್ಕೆ ಸಿಗದ್ದರಿಂದ ಲಾಕ್​​ಡೌನ್​ ವಿಧಿಸಬೇಕೇ ಬೇಡವೇ ಎಂಬ ಚರ್ಚೆಯೂ ನಡೆಯುತ್ತಿದೆ.

    ಅಂದಹಾಗೆ ಬಾರ್​-ಮದ್ಯದಂಗಡಿಯನ್ನು ಅತಿ ಅಗತ್ಯದ ವಸ್ತು ಎಂದು ಪರಿಗಣಿಸಿ, ನೈಟ್​-ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲೂ ತೆರೆದಿಡಬಹುದು ಎಂದು ಸರ್ಕಾರ ಅವಕಾಶ ನೀಡಿರುವ ಬಗ್ಗೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಗತ್ಯ ವಸ್ತುಗಳಲ್ಲಿ ಮದ್ಯ ಸೇರ್ಪಡೆ ವಿಚಾರವಾಗಿ ಅವರು ಧಾರವಾಡದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.

    ಇದನ್ನೂ ಓದಿ: ಈ ವಾಂತಿಗೂ ಕೋಟ್ಯಂತರ ರೂಪಾಯಿ ಬೆಲೆ!; ಮುರ್ಡೇಶ್ವರದಲ್ಲಿ ಸಿಕ್ಕಿತು ಅಂಬರ್ ಗ್ರೀಸ್ 

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಉತ್ತಮ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅತಿ ಅವಶ್ಯಕ ಸಾಮಗ್ರಿಗಳ ಮಾರಾಟ-ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದರಲ್ಲಿ ಕಿರಾಣಿ ಹಾಗೂ ಆಹಾರಕ್ಕೆ ಅವಕಾಶ ಮಾಡಿಕೊಟ್ಟಿದ್ದನ್ನು ನಾನು ಒಪ್ಪುತ್ತೇನೆ. ಆದರೆ ಬಾರ್​ ಹಾಗೂ ಮದ್ಯದಂಗಡಿ ಯಾವಾಗಿನಿಂದ ಅತಿ ಅವಶ್ಯಕವಾಯಿತು ಎಂದು ಬೆಲ್ಲದ ಪ್ರಶ್ನಿಸಿದ್ದಾರೆ.

    ಯಡಿಯೂರಪ್ಪ ಅವರಿಗೆ ಈ ಸಲಹೆಯನ್ನು ಯಾರು ಕೊಟ್ಟಿದ್ದಾರೋ ಗೊತ್ತಿಲ್ಲ. ನಾನು ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಅತಿ ಅವಶ್ಯಕ ಸಾಮಗ್ರಿಗಳ ಅಂಗಡಿ ಇರಲಿ ಪರವಾಗಿಲ್ಲ. ಆದರೆ ಬಾರ್​-ಮದ್ಯದಂಗಡಿ ಬಂದ್ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ‘ಕಥೆಗೆ ಸಾವಿಲ್ಲ’ ಕಥಾಸಂಕಲನ ಬಿಡುಗಡೆಯ ಬೆನ್ನಿಗೇ ಲೇಖಕನ ತಂದೆ ಕೋವಿಡ್​ಗೆ ಬಲಿ!

    ಮದುವೆ ಮಾಡಿಕೊಂಡಿದ್ದಕ್ಕೆ ವಧು-ವರರ ಮೇಲೆ ಬಿತ್ತು ಕೇಸ್; ಎರಡೂ ಕುಟುಂಬಗಳವರ ವಿರುದ್ಧ ಪ್ರಕರಣ ದಾಖಲು

    ಉಸಿರುಗಟ್ಟಿ ನರಳಾಡಿದ ಕೋವಿಡ್​ ಸೋಂಕಿತ; ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಂಡ ಸಿಬ್ಬಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts