ಬೆಂಗಳೂರು: ಗೃಹಿಣಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ವಿದ್ಯಾರಣ್ಯಪುರದ ರಾಮಚಂದ್ರಾಪುರದಲ್ಲಿ ನಡೆದಿದ್ದು, ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ವನಜಾಕ್ಷಿ (25) ಮೃತ ಗೃಹಿಣಿ. ಪತ್ನಿಯನ್ನು ಹತ್ಯೆಗೈದು ಪತಿ ಎಸ್ಕೇಪ್ ಆಗಿದ್ದಾನೆಂದು ವನಜಾಕ್ಷಿ ಪೋಷಕರು ಆರೋಪಿಸಿದ್ದಾರೆ. ವನಜಾಕ್ಷಿಗೆ 8 ತಿಂಗಳ ಹಿಂದೆ ನಾಗರಾಜ್ ಎಂಬುವರ ಜತೆ ವಿವಾಹ ಮಾಡಿಕೊಡಲಾಗಿತ್ತು.
ನವದಂಪತಿ ಮೂಲತಃ ಮಂಡ್ಯದ ನಾಗಮಂಗಲದವರು. ಇಬ್ಬರು ಬೆಂಗಳೂರಿನ ರಾಮಚಂದ್ರಪುರದಲ್ಲಿ ಬೇಕರಿ ನಡೆಸುತ್ತಿದ್ದರು. ಕರೊನಾ ಹಿನ್ನೆಲೆಯಲ್ಲಿ ಬೇಕರಿ ಬಿಸಿನೆಸ್ನಲ್ಲಿ ನಷ್ಟವಾಗಿತ್ತು. ಹೀಗಾಗಿ ಪತ್ನಿಗೆ ಹಣ ತರುವಂತೆ ನಾಗರಾಜ್ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ತವರು ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದೆ ಎಂದು ವನಜಾಕ್ಷಿ ಹೇಳಿದ್ದಳಂತೆ. ಹಣದ ವಿಚಾರವಾಗಿಯೇ ಪತಿ-ಪತ್ನಿ ಮಧ್ಯೆ ಕಳೆದ 6 ತಿಂಗಳಿಂದ ಕಿತ್ತಾಟ ನಡೆದಿತ್ತು. ಈ ಮಧ್ಯೆ ನಿನ್ನೆ ವನಜಾಕ್ಷಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪತಿಯೇ ಕೊಲೆಗೈದು ನೇಣು ಹಾಕಿಕೊಂಡಿರುವ ರೀತಿಯಲ್ಲಿ ಬಿಂಬಿಸಿದ್ದಾನೆಂದು ವನಜಾಕ್ಷಿ ಪಾಲಕರು ಗಂಭೀರ ಆರೋಪ ಮಾಡಿದ್ದಾರೆ. ಘಟನೆ ಬಳಿಕ ಪತಿ ನಾಗರಾಜ್ ಎಸ್ಕೇಪ್ ಆಗಿದ್ದು, ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಕಾಂಗ್ರೆಸ್ಗೆ ಬಿಗ್ ಶಾಕ್! ಪಕ್ಷ ತೊರೆದ 170 ಶಾಸಕರು: ಸಮೀಕ್ಷೆಯಿಂದ ಬಯಲಾಯ್ತು ಸತ್ಯ…
ಅಯ್ಯೋ… ಇದು ವಿಕ್ರಮ- ಬೇತಾಳ ಅಲ್ರಪ್ಪ… ಹಾಗಿದ್ರೆ ಇದೇನು ಅಂತೀರಾ? ಇಲ್ಲಿದೆ ನೋಡಿ ವಿವರ…
ಬ್ಯಾಂಕ್ನಲ್ಲಿ ಕೆಲಸ ಇದೆಯೆ? ಇಂದೇ ಮುಗಿಸಿ… ಇಲ್ಲದಿದ್ದರೆ ನಾಲ್ಕು ದಿನ ಪರದಾಡಬೇಕಾಗುತ್ತೆ!