More

    ಇಡ್ಲಿಗೆ ಹೆಚ್ಚುವರಿ ಸಾಂಬಾರ್​ ಕೊಡದಿದ್ದಕ್ಕೆ ಹೋಟೆಲ್​ ಸೂಪರ್​ವೈಸರ್​ನನ್ನೇ ಕೊಂದ ಅಪ್ಪ-ಮಗ!

    ಚೆನ್ನೈ: ಇಡ್ಲಿಗೆ ಹೆಚ್ಚುವರಿ ಸಾಂಬಾರ್​ ಕೊಡಲಿಲ್ಲ ಅಂತಾ ಅಪ್ಪ-ಮಗ ಇಬ್ಬರು ಸೇರಿಕೊಂಡು ಹೋಟೆಲ್​ ಮೇಲ್ವಿಚಾರಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆ ತಮಿಳುನಾಡಿನ ಪಲ್ಲಾವರಂ ಬಳಿಯ ಪಮ್ಮಳ್​ ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

    ಅರುಣ್​ (29) ಕೊಲೆಯಾದ ಸೂಪರ್​ವೈಸರ್​. ಶಂಕರ್​ (55) ಮತ್ತು ಅವನ ಪುತ್ರ ಅರುಣ್​ ಕುಮಾರ್​ (30) ಹತ್ಯೆಗೈದ ಆರೋಪಿಗಳು.

    ಅಪ್ಪ-ಮಗ ಇಬ್ಬರು ಇಡ್ಲಿ ಕೊಂಡೊಯ್ಯಲೆಂದು ಅನಕಪುತ್ತೂರಿನ ಪರಿ ನಗರದಲ್ಲಿರುವ ರೆಸ್ಟೋರೆಂಟ್​ ಒಂದಕ್ಕೆ ತೆರಳಿದ್ದರು. ಆರ್ಡರ್​ ಮಾಡಿದ ಇಡ್ಲಿಯನ್ನು ಪಡೆದುಕೊಂಡ ಬಳಿಕ ಇಬ್ಬರು ಹೆಚ್ಚುವರಿ ಸಾಂಬಾರ್​ ಕೊಡುವಂತೆ ಸಿಬ್ಬಂದಿ ಬಳಿ ಕೇಳಿದ್ದಾರೆ. ಆದರೆ, ನಮ್ಮಲ್ಲಿ ಹೆಚ್ಚುವರಿ ಸಾಂಬಾರ್​ ಪಾಕೆಟ್​ಗಳನ್ನು ಕೊಡುವುದಿಲ್ಲ ಎಂದು ಸಿಬ್ಬಂದಿ ಹೇಳಿದಾಗ ಇಬ್ಬರು ವಾಗ್ವಾದಕ್ಕೆ ಇಳಿದು ಹೈಡ್ರಾಮ ಮಾಡಿದರು.

    ಇದಾದ ಬಳಿಕ ಅಪ್ಪ-ಮಗ ರೆಸ್ಟೋರೆಂಟ್​ನಿಂದ ಹೊರನಡೆದು ವಾಹನ ಪಾರ್ಕಿಂಗ್​ ಸ್ಥಳಕ್ಕೆ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಸೆಕ್ಯುರಿಟಿ ಬೇಗ ವಾಹನ ತೆಗೆಯುವಂತೆ ಹೇಳಿದಾಗ ಆಕ್ರೋಶಗೊಂಡ ಅಪ್ಪ-ಮಗ ಸೆಕ್ಯುರಿಟಿ ಮೇಲೆಯೇ ಹಲ್ಲೆ ಮಾಡಿದ್ದಾರೆ. ಇದನ್ನು ಗಮನಿಸಿದ ಸೂಪರ್​ವೈಸರ್​ ಅರುಣ್​, ಸ್ಥಳಕ್ಕೆ ಧಾವಿಸಿ ಹಲ್ಲೆಯನ್ನು ತಡೆಯಲು ಯತ್ನಿಸಿದರು. ಆದರೆ, ಆರೋಪಿ ಅರುಣ್​ ಕುಮಾರ್​, ಅರುಣ್​ ತಲೆ, ಹಣೆ ಮತ್ತು ಕುತ್ತಿಗೆ ಮೇಲೆ ಬಲವಾಗಿ ಹಲ್ಲೆ ಮಾಡಿದ್ದರಿಂದ ಸ್ಥಳದಲ್ಲಿಯೇ ಅರುಣ್​ ಪ್ರಜ್ಞೆ ತಪ್ಪಿ ಬಿದ್ದರು.

    ಇದನ್ನು ಗಮನಿಸಿದ ದಾರಿಹೋಕರು ಕೂಡಲೇ ಪ್ರಜ್ಞೆ ತಪ್ಪಿ ಬಿದ್ದಿದ್ದ ಅರುಣ್​ರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅರುಣ್​ ಮೃತಪಟ್ಟಿದ್ದರು.

    ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಶಂಕರ್​ ನಗರ್​ ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಗಳಾದ ಶಂಕರ್​ ಮತ್ತು ಅರುಣ್​ಕುಮಾರ್​ನನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

    ಸೂಪರ್​ವೈಸರ್​ ಅರುಣ್​ ತಂಜೂರಿನವರಾಗಿದ್ದು, ಚೆನ್ನೈಗೆ ಬಂದು ಕಳೆದ ಕೆಲವು ವರ್ಷಗಳಿಂದ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಅರುಣ್ ತನ್ನ ಪ್ರಿಯಕರ ಪವಿತ್ರಾಳನ್ನು ಮದುವೆಯಾಗಿ ಪೊಜಿಚಲೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಮದ್ವೆಯಾದ ಕೆಲವೇ ತಿಂಗಳಲ್ಲಿ ನಟಿಯ ಕಳ್ಳಾಟ ಗಂಡನಿಂದಲೇ ಬಯಲು: ಮನೆಯ ಕಬೋರ್ಡ್​ನಲ್ಲಿ ಕಾಂಡೋಮ್ಸ್​ ಪತ್ತೆ

    ತುಕಾಲಿ ಸಂತೋಷ್​ ಕಾರು ಅಪಘಾತ ಪ್ರಕರಣ: ಚಿಕಿತ್ಸೆ ಫಲಿಸದೇ ಆಟೋ ಚಾಲಕ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts