More

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ನಾಸಿರ್​ಗೆ ರಾಜಾತಿಥ್ಯ? ಆಂತರಿಕ ತನಿಖೆಗೆ ಆದೇಶ

    ಬೆಂಗಳೂರು: ಐವರು ಶಂಕಿತ ಉಗ್ರರ ಬಂಧನ ಪ್ರಕರಣವೀಗ ಪರಪ್ಪನ ಅಗ್ರಹಾರ ಜೈಲಿಗೂ ಶಿಫ್ಟ್​ ಆಗಿದೆ. ಪ್ರಕರಣದ ಎ-1 ಆರೋಪಿಯಾಗಿರುವ ಉಗ್ರ ನಾಸಿರ್​ಗೆ ಜೈಲಿನಲ್ಲಿ ರಾಜಾಥಿತ್ಯ ಸಿಗುತ್ತಿತ್ತು ಎನ್ನಲಾಗಿದೆ. ಹಣದಾಸೆಗಾಗಿ ಅಧಿಕಾರಿಗಳು ನಾಸಿರ್‌ಗೆ ಸಪೋರ್ಟ್ ಮಾಡುತ್ತಿದ್ದರಾ? ಎಂಬ ಅನುಮಾನ ಹುಟ್ಟಿಕೊಂಡಿದೆ.

    ಉಗ್ರ ನಾಸಿರ್​ ಜೈಲಿನಲ್ಲಿದ್ದುಕೊಂಡೇ ಜಿಹಾದಿ ಬಗ್ಗೆ ಬೇರೆ ಕೈದಿಗಳಿಗೆ ಟ್ರೈನಿಂಗ್ ಕೊಡುತ್ತಿದ್ದ. ಅತೀ ಭದ್ರತಾ ವಿಭಾಗದಲ್ಲಿದ್ರೂ ನಾಸಿರ್​ಗೆ ವಿಐಪಿ ಆತಿಥ್ಯ ನೀಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಇಲ್ಲೊಂದು ವಿಚಿತ್ರ ಮದುವೆ: ವರನಿಗೆ ಹೊಡೆದು ಬಡಿದು ಮಾಂಗಲ್ಯ ಕಟ್ಟಿಸಿಕೊಂಡ ವಧು: ಅಷ್ಟಕ್ಕೂ ಯಾಕೆ ಇದೆಲ್ಲ..?

    ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಸಿರ್​ಗೆ ರಾಜ್ಯಾತಿಥ್ಯ ಆರೋಪ ಬೆನ್ನಲ್ಲೇ ಆಂತರಿಕ ತನಿಖೆಗೆ ಆದೇಶ ಮಾಡಲಾಗಿದೆ. ಕಾರಾಗೃಹಗಳ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ತನಿಖೆಗೆ ಆದೇಶ ಮಾಡಿದ್ದಾರೆ. ಅತೀ ಭದ್ರತಾ ಸೆಲ್‌ನಲ್ಲಿದ್ದ ನಾಸಿರ್, ಬಂಧಿತ ಐವರು ಶಂಕಿತರು ಹಾಗೂ ನಾಪತ್ತೆಯಾಗಿರುವ ಜುನೈದ್​ನನ್ನು ಸಂಪರ್ಕ ಮಾಡಿದ್ದ. ನಾಸಿರ್ ಜೊತೆ ಜೈಲಾಧಿಕಾರಿಗಳು ಸಹ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆಂತರಿಕ ತನಿಖೆ ನಡೆಸುವಂತೆ ಎಡಿಜಿಪಿ ಆದೇಶಿಸಿದ್ದಾರೆ.

    ನಾಸಿರ್​ನ ಕರಾಳ ಹಿನ್ನೆಲೆ

    ಶಂಕಿತ ಉಗ್ರರ ಕಮಾಂಡರ್ ನಾಸಿರ್‌ ಕರಾಳ ಹಿನ್ನೆಲೆ ಹೊಂದಿದ್ದಾನೆ. 2008ರ ಬೆಂಗಳೂರು ಸರಣಿ ಸ್ಫೋಟದಲ್ಲಿ ನಾಸಿರ್ ಲಾಕ್ ಆಗಿದ್ದ. ಇದೀಗ ಮುಂಬೈ ಮಾದರಿ ಬೆಂಗಳೂರು ಸ್ಫೋಟಕ್ಕೆ ನಾಸಿರ್ ಸ್ಕೆಚ್ ಹಾಕಿದ್ದರು. ಈತ ನಿಷೇಧಿತ LeT ಸಂಘಟನೆಯವನಲ್ಲ. ನಿಷೇಧಿತ ಸಿಮಿ ಉಗ್ರ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. ಸಿಮಿ ಬ್ಯಾನ್ ಆದ ಕೂಡಲೇ ಇಂಡಿಯನ್ ಮುಜಾಹಿದ್ದೀನ್‌ ಸಂಘಟನೆಗೆ ಸೇರಿದ್ದ. ಕೇರಳದ ಕೊಲ್ಲಂನವನಾದ ನಾಸಿರ್, ಸರಣಿ ಸ್ಫೋಟಕ್ಕೆ ಸ್ಕೆಚ್ ಹಾಕಿದ್ದ. ಉಗ್ರ ಮದನಿ ಜೊತೆ ಸೇರಿ 2008ರಲ್ಲಿ ಬೆಂಗಳೂರು ಸ್ಫೋಟ ನಡೆಸಿದ್ದ. ಬೆಂಗಳೂರಿನ ಎಂಟು ಕಡೆ ಬಾಂಬ್‌ಗಳನ್ನು ಇಟ್ಟು ಸ್ಫೋಟಿಸಿದ್ದ.

    ಶಂಕಿತ ಉಗ್ರರ ಮನೆಯಲ್ಲಿ ಸಿಕ್ಕ 4 ವಾಕಿಟಾಕಿಯ ಸ್ಫೋಟಕ ರಹಸ್ಯ ಬಯಲು: BMTC ಬಸ್ಸೇ ಟಾರ್ಗೆಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts