ಹೊಳಲ್ಕೆರೆ: ಹಳೇ ವಿದ್ಯಾರ್ಥಿಗಳ ಸಂಘ ರಚನೆಯಿಂದ ಶಾಲೆ ಪ್ರಗತಿಗೆ ಅನುಕೂಲವಾಗಿದೆ ಎಂದು ಪ್ರಾಂಶುಪಾಲೆ ನಿರ್ಮಲಾದೇವಿ ಹೇಳಿದರು.
ಇಲ್ಲಿನ ಎಂಎಂ ಸರ್ಕಾರಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಹಳೇ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಸೌಲಭ್ಯ ಕಲ್ಪಿಸಿದ್ದು, ಸದುಪಯೋಗ ಪಡಿಸಿಕೊಂಡು ಮಕ್ಕಳ ಪ್ರಗತಿಗೆ ಶ್ರಮಿಸುವ ಹೊಣೆ ಸರ್ಕಾರದ ಮೇಲಿದೆ ಎಂದರು.
ಹಳೇ ವಿದ್ಯಾರ್ಥಿಗಳಾದ ಎಚ್.ಬಿ.ಸುದರ್ಶನ್ ಕುಮಾರ್, ಷಣ್ಮುಖಪ್ಪ ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ದಿನೇಶ್, ಹಳೇ ವಿದ್ಯಾರ್ಥಿಗಳಾದ ಬಿ.ಜಿ.ಗಿರೀಶ್, ಮಲ್ಲಿಕಾರ್ಜುನ್, ಎಂ.ಎಲ್.ಕಾಶಿನಾಥ, ಲೋಕದೊಳಲು ಸಿ.ವಿ.ಚಂದ್ರಶೇಖರ್, ಶಿಕ್ಷಕಿ ಸುಕನ್ಯಾ ಮಂಜುನಾಥ ಇದ್ದರು.