More

    5 ಲಕ್ಷ ರೂ. ಮುಕ್ತಿ ಭಾವುಟ ಹರಾಜು

    ಹಿರಿಯೂರು: ಇತಿಹಾಸ ಪ್ರಸಿದ್ಧ ತೇರುಮಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.

    ಕಳೆದ ನಾಲ್ಕು ವರ್ಷದಿಂದ ರಥೋತ್ಸವದ ದಿನ ಮುಕ್ತಿ ಬಾವುಟ ಹರಾಜು ಹಾಕಲಾಗುತ್ತಿದ್ದು, 2018ರಲ್ಲಿ ವೀರೇಂದ್ರ ಪಪ್ಪಿ ದಾಖಲೆಯ 31 ಲಕ್ಷ ರೂಪಾಯಿಗೆ ಪಡೆದಿದ್ದರು. ಕಳೆದ ವರ್ಷ ಮಾಜಿ ಸಚಿವ ಡಿ.ಸುಧಾಕರ್ 11 ಲಕ್ಷ ರೂ.ಗೆ ಪಡೆದುಕೊಂಡಿದ್ದರು. ಈ ಬಾರಿ ಬಿಜೆಪಿ ಮುಖಂಡ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್.ಲಕ್ಷ್ಮೀಕಾಂತ್ 5 ಲಕ್ಷ ರೂಪಾಯಿಗೆ ಪಡೆದುಕೊಂಡರು.

    ಬಾವುಟ ಪಡೆದುಕೊಂಡು ದೇವರಿಗೆ ಭಕ್ತಿ ಸಮರ್ಪಿಸಿದ ಬಳಿಕ ಮಾತನಾಡಿದ ಲಕ್ಷ್ಮೀಕಾಂತ್, ತೇರುಮಲ್ಲೇಶ್ವರ ಸ್ವಾಮಿ ಕೃಪೆಯಿಂದ ಈ ಬಾರಿ ಮುಕ್ತಿ ಬಾವುಟ ಲಭಿಸಿದ್ದು ನನ್ನ ಅದೃಷ್ಟ. ಮುಂಬರುವ ದಿನಗಳಲ್ಲಿ ಅವಕಾಶ ಸಿಕ್ಕರೆ ತಾಲೂಕಿನ ಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts