ಹೈದರಾಬಾದ್: ಈಗಾಗಲೇ ‘ಮೆಗಾ ಸ್ಟಾರ್’ ಚಿರಂಜೀವಿ ನಾಯಕತ್ವದ ‘ಆಚಾರ್ಯ’ ಶೂಟಿಂಗ್ಗೂ ಮುನ್ನವೇ ಬಾರೀ ಸುದ್ದಿಯಲ್ಲಿದೆ. ಚಿರಂಜೀವಿಗೆ ನಾಯಕಿ ಯಾರು ಎಂಬ ವಿಚಾರಕ್ಕೆ ಸದ್ದು ಮಾಡಿದ್ದ ಈ ಸಿನಿಮಾ, ಇದೀಗ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರಾಮಚರಣ್ಗೂ ನಾಯಕಿ ಯಾರು ಎಂಬ ವಿಚಾರಕ್ಕೆ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ‘ಎಲ್ಲಿಂದ ಶುರು ಮಾಡಲಿ?’ ಎಂದು ಕೇಳಿದ್ದಾರೆ ನಟಿ ಸನ್ನಿ ಲಿಯೋನ್; ಯಾಕಿರಬಹುದು?
ಈಗಾಗಲೇ ನಿರ್ದೇಶಕರು ಹುಡುಕಾಟ ನಡೆಸಿದ್ದು, ಇಬ್ಬರು ಟಾಪ್ ನಟಿಯರ ಮೇಲೆ ಕಣ್ಣಿಟ್ಟಿದ್ದಾರೆ. ಆ ಇಬ್ಬರಲ್ಲಿ ಯಾರು ಆಯ್ಕೆ ಆಗುತ್ತಾರೆ ಎಂಬುದೇ ಅಚ್ಚರಿಯ ಪ್ರಶ್ನೆ. ಹೌದು, ‘ಆಚಾರ್ಯ’ ಚಿತ್ರದಲ್ಲಿ ರಾಮಚರಣ್ಗೆ ಜೋಡಿಯಾಗಿ ಕೀರ್ತಿ ಸುರೇಶ್ ಅಥವಾ ಕಿಯಾರಾ ಅಡ್ವಾಣಿ ಇಬ್ಬರಲ್ಲಿ ಒಬ್ಬರು ನಾಯಕಿಯಾಗುವ ಸಾಧ್ಯತೆ ಎನ್ನಲಾಗಿತ್ತು. ಅಷ್ಟೇ ಅಲ್ಲ ರಶ್ಮಿಕಾ ಮಂದಣ್ಣ ಹೆಸರೂ ತಳುಕು ಹಾಕಿಕೊಂಡಿತ್ತು.
ಇದನ್ನೂ ಓದಿ: ವಿಷ ಕಾರೋದು ಕಂಗನಾಗೆ ಅಭ್ಯಾಸವಾಗಿಬಿಟ್ಟಿದೆ: ಸ್ವರಾ ಭಾಸ್ಕರ್
ಇದೀಗ ಈ ಇಬ್ಬರಲ್ಲಿ ಕಿಯಾರಾ ಅಡ್ವಾಣಿ ನಟಿಸುವುದು ಅಧಿಕೃತ ಎಂದೇ ಹೇಳಲಾಗುತ್ತಿದೆ. ಬಹುಭಾಷೆಯಲ್ಲಿ ಈ ಸಿನಿಮಾ ತೆರೆಗೆ ಬರಲಿರುವುದರಿಂದ ಹಿಂದಿ ಭಾಷಿಕರನ್ನು ಸೆಳೆಯಲು ಕಿಯಾರಾ ಅವರನ್ನು ತಂಡ ಆಯ್ದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನಷ್ಟೇ ಈ ಬಗ್ಗೆ ತಂಡವೇ ಅಧಿಕೃತವಾಗಿ ಘೋಷಣೆ ಮಾಡಿಕೊಳ್ಳಬೇಕಿದೆ. ಕಿಯಾರಾನಾ ರಶ್ಮಿಕಾನಾ ಎಂಬುದು ಗೊತ್ತಾಗಬೇಕಿದೆ. (ಏಜೆನ್ಸೀಸ್)
VIDEO| ನನ್ನ ಹೊಸ ವಿಡಿಯೋಗೆ ಕೆಟ್ಟ ಕಾಮೆಂಟ್ಗಳು ಹರಿದುಬರುತ್ತಿವೆ: ಬಾಲಿವುಡ್ ಗಾಯಕಿಯ ಅಳಲು!