ಬೆಂಗಳೂರು: ಹೀಟ್ ವೇವ್ ಅಥವಾ ಉಷ್ಣದ ಅಲೆಯ ಪರಿಣಾಮ ಬೇಸಿಗೆಯಲ್ಲಿ ಅನಾರೋಗ್ಯಕ್ಕೆ ಒಳಗಾಗುವುದು ಸಹಜ. ಇತ್ತೀಚಿನ ದಿನಗಳಲ್ಲಂತೂ ಶಾಖ ಇನ್ನು ಹೆಚ್ಚಾಗಲು ಪ್ರಾರಂಭಿಸಿದ್ದು, ನಾವು ನಮ್ಮ ಬಗ್ಗೆ ಕಾಳಜಿವಹಿಸುವುದು ಬಹಳ ಮುಖ್ಯ. ಸುಡುವ ಬಿಸಿಲಿನಲ್ಲಿ ಬಿಸಿ ಗಾಳಿ ಬೀಸಿದಾಗ ಅದು ಎಷ್ಟು ಬಿಸಿಯಾಗಿರುತ್ತದೆ ಎಂಬುದು ನಮ್ಮೆಲ್ಲರ ಗಮನಕ್ಕೆ ಬಂದಿರುತ್ತದೆ. ದಿನನಿತ್ಯ ಪ್ರಮುಖ ಕೆಲಸಗಳಿಗೆ ಅಥವಾ ಕಚೇರಿಗೆ ಹೋಗಬೇಕಾದರೆ ಸುಡು ಬಿಸಿಲಿನಲ್ಲಿಯೇ ಹೊರಹೋಗಬೇಕು, ಬೇಡವೆಂದರೂ ಬಿಸಿಲ ಬೇಗೆಯನ್ನು ಸಹಿಸಿಕೊಳ್ಳಬೇಕು. ಹಾಗಾಗಿ ನಿಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಒಳಿತು. ಇಲ್ಲಿ ಶಾಖದ ಹೊಡೆತದಿಂದ ದೇಹವನ್ನು ತಂಪಾಗಿಡಲು ಸಹಾಯ ಮಾಡುವ ಕೆಲವು ಆಹಾರ ಪದಾರ್ಥಗಳಿವೆ. ಈ ಆಹಾರ ಪದಾರ್ಥಗಳು ಯಾವುವು ಎಂದು ತಿಳಿಯೋಣ…
ತಾಜಾ ಹಣ್ಣುಗಳು ಮತ್ತು ತರಕಾರಿಗಳು
ತಾಜಾ ಹಣ್ಣುಗಳು ಮತ್ತು ತರಕಾರಿಗಳಾದ ಸೌತೆಕಾಯಿ, ಕಲ್ಲಂಗಡಿ, ಕಬ್ಬು, ಅನಾನಸ್, ದ್ರಾಕ್ಷಿ ಸೇರಿದಂತೆ ಸಿಟ್ರಸ್ ಹಣ್ಣುಗಳು, ಪ್ಲಮ್, ಪೀಚ್ ಹಾಗೂ ವಿವಿಧ ನೀರು ಭರಿತ ಹಣ್ಣುಗಳು, ತರಕಾರಿಗಳನ್ನು ಸೇವಿಸುವುದರಿಂದ ಶಾಖದ ಹೊಡೆತ ತಡೆಯಲು ಸಹಾಯ ಮಾಡುತ್ತದೆ.
ಮಜ್ಜಿಗೆ ಅಥವಾ ಲಸ್ಸಿ
ಮಜ್ಜಿಗೆ ಅಥವಾ ಲಸ್ಸಿ ಕುಡಿಯುವುದರಿಂದ ದೇಹವನ್ನು ತಂಪಾಗಿ ಮತ್ತು ತಾಜಾವಾಗಿಡಲು ಸಹಾಯ ಮಾಡುತ್ತದೆ.
ಎಳನೀರು
ಎಳ ನೀರಿನಲ್ಲಿ ಕಂಡುಬರುವ ವಿಶೇಷ ಕಿಣ್ವವು ದೇಹವನ್ನು ತಂಪಾಗಿಸುತ್ತದೆ ಮತ್ತು ಶುದ್ಧವಾಗಿಡುತ್ತದೆ.
ತಣ್ಣೀರು
ಬೇಸಿಗೆಯಲ್ಲಿ ತಣ್ಣೀರು ಕುಡಿಯುವುದು ಬಹಳ ಮುಖ್ಯ, ಏಕೆಂದರೆ ದೇಹ ಹೈಡ್ರೇಟ್ ಆಗಿರುವುದು ಬಹಳ ಮುಖ್ಯ ಮತ್ತು ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸೌತೆಕಾಯಿ
ಸೌತೆಕಾಯಿ ದೇಹವನ್ನು ತಂಪಾಗಿ ಮತ್ತು ತಾಜಾವಾಗಿಡಲು ಸಹಾಯ ಮಾಡುತ್ತದೆ. ಸೌತೆಕಾಯಿಯನ್ನು ಸಲಾಡ್ ಆಗಿ ತಿನ್ನಬಹುದು ಅಥವಾ ಬೇಕಿದ್ದರೆ ಮೊಸರಿನಲ್ಲಿ ಬೆರೆಸಿ ತಿನ್ನಬಹುದು.
ಮೊಸರು
ಮೊಸರು ಕುಡಿಯುವುದರಿಂದ ದೇಹ ತಂಪಾಗುತ್ತದೆ ಮತ್ತು ಆರಾಮದಾಯಕವಾಗಿರುತ್ತದೆ. ನೀವು ದಿನಕ್ಕೆ ಒಂದು ಲೋಟ ಮೊಸರು ತಿನ್ನುವುದರಿಂದ ಹೊಟ್ಟೆಯಲ್ಲಿನ ಶಾಖವನ್ನು ಶಾಂತಗೊಳಿಸುವುದರ ಜೊತೆಗೆ, ದೇಹವು ತಂಪಾಗಿರುತ್ತದೆ.
ಬಿಳಿ ಧನಿಯಾ ಮತ್ತು ಮೆಣಸಿನಕಾಳು
ಬಿಳಿ ಧನಿಯಾ ಮತ್ತು ಮೆಣಸಿನಕಾಳು ಸೇವಿಸುವುದರಿಂದ ದೇಹಕ್ಕೆ ತಂಪು ಸಿಗುತ್ತದೆ ಮತ್ತು ಶಾಖದ ಹೊಡೆತದಿಂದ ರಕ್ಷಿಸುತ್ತದೆ.
ಈ ಆಹಾರವನ್ನು ಸೇವಿಸುವ ಮೂಲಕ, ನಿಮ್ಮ ದೇಹವು ಶಾಖದ ಹೊಡೆತದಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡಬಹುದು. ಇದಲ್ಲದೆ, ನೀವು ಹೆಚ್ಚು ನೀರು ಕುಡಿಯಬೇಕು, ಹತ್ತಿ ಬಟ್ಟೆಗಳನ್ನು ಧರಿಸಬೇಕು.
ಸೂರ್ಯಗ್ರಹಣದ ನಂತರ ಈ ರಾಶಿಚಕ್ರ ಚಿಹ್ನೆಗಳ ಜನರು ದುಡ್ಡಿನ ವಿಷಯದಲ್ಲಿ ಜಾಗರೂಕರಾಗಿರಬೇಕು…