ನವದೆಹಲಿ: ಭಾರೀ ತಾಪಮಾನದಿಂದಾಗಿ ಸುಡುಬಿಸಿಲಿನಿಂದ ರೋಸಿಹೋಗಿದ್ದ ರಾಷ್ಟ್ರ ರಾಜಧಾನಿ ಜನರಿಗೆ ಗುರುವಾರ ಬೆಳಗ್ಗೆ ಸುರಿದ ಮಳೆಯಿಂದಾಗಿ ಸ್ವಲ್ಪ ನಿರಾಳವಾಗಿದ್ದಾರೆ.
ಶೇ.40ಕ್ಕೂ ಅಧಿಕ ತಾಪಮಾನದಿಂದ ಜನರು ಸಾಕಾಗಿಹೋಗಿದ್ದರು. ಸದ್ಯ ಬೆಳ್ಳಂಬೆಳಗ್ಗೆ ಸುರಿದ ಮಳೆಯಿಂದಾಗಿ, ಈಗ ಸಹಜ ತಾಪಮಾನ ದಾಖಲಾಗಿದೆ. ಈ ಬಾರಿ ಮಾನ್ಸೂನ್ ಪ್ರವೇಶ ವಿಳಂಬದಿಂದಾಗಿ ತಾಪಮಾನ ಹೆಚ್ಚಾಗಲು ಕಾರಣವಾಗಿತ್ತು.
ಪೂರ್ವ ದೆಹಲಿಯ ಕೈಲಾಶ್, ಬುರಾರಿ, ಪತಪರ್ಗಂಜ್, ಇಂಡಿಯಾಗೇಟ್, ದಿಲ್ಲಿ-ನೋಯ್ಡಾ ಮತ್ತು ದಿಲ್ಲಿ-ಗುರ್ಗಾಂವ್ ರಸ್ತೆಯ ತುಂಬೆಲ್ಲಾ ಮಳೆ ನೀರು ನಿಂತಿದ್ದು, ವಾಹನ ಸವಾರರ ಸಂಚಾರಕ್ಕೆ ಸ್ವಲ್ಪ ಮಟ್ಟಿನ ತೊಂದರೆಯಾಯಿತು.
ಇತ್ತ ಭಾರೀ ಮಳೆಯಿಂದಾಗಿ ಎರಡು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಜೈಪುರ ಹಾಗೂ ಅಮೃತಸರಕ್ಕೆ ತೆರಳಬೇಕಿದ್ದ ಇಂಡಿಗೋ ವಿಮಾನ ಸಂಚಾರವನ್ನು ಬದಲಿಸಲಾಗಿತ್ತು. ಇನ್ನು ಹಲವು ವಿಮಾನಗಳ ಸಂಚಾರ ವಿಳಂಬವಾಗಲಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಎಜೆನ್ಸೀಸ್)
ಹಲವು ವರ್ಷಗಳಿಂದ ಮುಚ್ಚಿದ ಆಸ್ಪತ್ರೆ ಕಟ್ಟಡದಲ್ಲಿ ಇಬ್ಬರು ಹೆಣ್ಣು ಮಕ್ಕಳು ಸೇರಿ ನಾಲ್ವರ ಶವ ಪತ್ತೆ!