More

    ಚುನಾವಣೆ: ನಾಗಾಲ್ಯಾಂಡ್​ನ ಆರು ಜಿಲ್ಲೆಗಳಲ್ಲಿ 0% ಮತದಾನ, ಕಾರಣ ಹೀಗಿದೆ..!

    ನವದೆಹಲಿ: ನಾಗಾಲ್ಯಾಂಡ್‌ ರಾಜ್ಯದ ಪೂರ್ವಭಾಗದ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ ದಾಖಲಾಗಿದೆ. ಇಲ್ಲಿನ ಸಾರ್ವಜನಿಕರು ಮತದಾನವನ್ನೇ ಬಹಿಷ್ಕರಿಸಿದ್ದಾರೆ. ಪ್ರತ್ಯೇಕ ಪ್ರದೇಶವನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಮತದಾನ ಬಹಿಷ್ಕರಿಸಲಾಗಿದೆ.

    ಇದನ್ನೂ ಓದಿ: ಲೋಕಸಭೆ ಚುನಾವಣೆ: ಮಣಿಪುರದಲ್ಲಿ ಗುಂಡಿನ ದಾಳಿ! ದಿಕ್ಕಾಪಾಲಾದ ಮತದಾರರು

    ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ (ಇಎನ್​ಪಿಒ) ಇಂದು ಶುಕ್ರವಾರ ‘ಪಬ್ಲಿಕ್ ಎಮರ್ಜೆನ್ಸಿ’ ಘೋಷಣೆ ಮಾಡಿ, ಚುನಾವಣೆಯನ್ನು ಬಾಯ್ಕಾಟ್ ಮಾಡುವಂತೆ ಸಾರ್ವಜನಿಕರಿಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಹುತೇಕ ಇಲ್ಲಿ ಮತದಾನ ಆಗಿಲ್ಲ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್​ನ ಮುಖ್ಯ ಚುನಾವಣಾಧಿಕಾರಿಯಿಂದ ಇಎನ್​ಪಿಒಗೆ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ.

    ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ ಸಂಘಟನೆಯು ಚುನಾವಣೆ ವೇಳೆ ಪ್ರಭಾವ ಬೀರಲು ಪ್ರಯತ್ನಿಸಿದೆ. ಪೂರ್ವ ನಾಗಾಲ್ಯಾಂಡ್​ನ ನಿವಾಸಿಗಳು ಸಾರ್ವತ್ರಿಕ ಚುನಾವಣೆಯಲ್ಲಿ ಮುಕ್ತವಾಗಿ ಪಾಲ್ಗೊಳ್ಳಲು ಅಡಚಣೆ ಮಾಡಿದೆ. ಆದ್ದರಿಂದ ಐಪಿಸಿ ಸೆಕ್ಷನ್ 171Cಸಿ ಸಬ್​ಸೆಕ್ಷನ್ ಅಡಿಯಲ್ಲಿ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ಚುನಾವಣಾ ಅಧಿಕಾರಿ ಶೋಕಾಸ್ ನೋಟೀಸ್ ನೀಡಿದ್ದಾರೆ.

    ಜನರೇ ಸ್ವಯಿಚ್ಛೆಯಿಂದ ಕೈಗೊಂಡ ನಿರ್ಧಾರ:  ಪೂರ್ವ ನಾಗಾಲ್ಯಾಂಡ್ ಪ್ರದೇಶ ನಮ್ಮ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಸಮಾಜ ಘಾತುಕ ಶಕ್ತಿಗಳು ಸೇರಿ ಹಿಂಸಾಚಾರ ಆಗುವ ಸಾಧ್ಯತೆ ಇತ್ತು. ಅದನ್ನು ನಿಯಂತ್ರಿಸಲು ಪಬ್ಲಿಕ್ ಎಮರ್ಜೆನ್ಸಿ ಎಂದು ಅಧಿಸೂಚನೆ ತರಲಾಯಿತು. ಸಂಬಂಧಿತ ಜನರು ಮತ್ತು ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಎಮರ್ಜೆನ್ಸಿ ಘೋಷಿಸಲಾಗಿದೆ. ಇದು ಜನರೇ ಸ್ವಯಿಚ್ಛೆಯಿಂದ ಕೈಗೊಂಡ ನಿರ್ಧಾರ. ಚುನಾವಣೆಯ ಕಾರ್ಯಗಳಿಗೆ ತಡೆ ತರುವ ಪ್ರಯತ್ನ ಅಲ್ಲ ಇದು. ಹೀಗಾಗಿ, ಸೆಕ್ಷನ್ 171ಸಿ ನಿಯಮ ಇದಕ್ಕೆ ಅನ್ವಯ ಆಗುವುದಿಲ್ಲ ಎಂದು ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ ಸ್ಪಷ್ಟಪಡಿಸಿದೆ.

    ಇಎನ್‌ಪಿಒಗೆ ಮನವಿ ಮಾಡಿತ್ತು: ಮಾರ್ಚ್ 30 ರಂದು ಇಎನ್‌ಪಿಒ 20 ಶಾಸಕರು ಮತ್ತು ಇತರ ಸಂಘಟನೆಗಳೊಂದಿಗೆ ರಹಸ್ಯೆ ಸಭೆ ನಡೆಸಿತ್ತು. ಇದರಲ್ಲಿ ಅದು ಲೋಕಸಭೆ ಚುನಾವಣೆಯಿಂದ ಸಂಪೂರ್ಣವಾಗಿ ದೂರವಿರುವ ತನ್ನ ನಿರ್ಧಾರವನ್ನು ಪುನರುಚ್ಛರಿಸಿತ್ತು. 20 ಶಾಸಕರನ್ನು ಒಳಗೊಂಡ ಪೂರ್ವ ನಾಗಾಲ್ಯಾಂಡ್ ಶಾಸಕರ ಒಕ್ಕೂಟವು ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಇಎನ್‌ಪಿಒಗೆ ಮನವಿ ಮಾಡಿತ್ತು.

    ಮರುದಿನ ಚುನಾವಣೆಯಲ್ಲಿ ಮತ ಚಲಾಯಿಸದಿರುವ ತಮ್ಮ ನಿರ್ಧಾರದ ಬಗ್ಗೆ ಇಎನ್​ಪಿಒ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿತ್ತು. ಇದು “ಪ್ರಜಾಪ್ರಭುತ್ವದ ಆಡಳಿತದ ಚೌಕಟ್ಟಿನೊಳಗೆ ನಡೆಯುತ್ತಿರುವ ಹೋರಾಟ ಇದು ಪ್ರಜಾಪ್ರಭುತ್ವವನ್ನು ಧಿಕ್ಕರಿಸುವ ಕ್ರಮವಲ್ಲ ಎಂದು ಸ್ಪಷ್ಟಪಡಿಸಿತ್ತು.
    ಸಂಘಟನೆಯು ಮಾರ್ಚ್ 8 ರಂದು ‘ಸಾರ್ವಜನಿಕ ತುರ್ತು ಪರಿಸ್ಥಿತಿ ಘೋಷಿಸಿತ್ತು. ಇಎನ್​ಪಿಒ ಈ ಭಾಗದ ಪ್ರದೇಶದ ಏಳು ನಾಗಾ ಬುಡಕಟ್ಟುಗಳ ಉನ್ನತ ಸಂಘಟನೆಯಾಗಿದ್ದು, ಈ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೂ ಅನುಮತಿ ನೀಡಿರಲಿಲ್ಲ.

    ಕಳೆದ ವರ್ಷದ ವಿಧಾನಸಭೆ ಚುನಾವಣೆಯ ಮೊದಲು ಇಎನ್​ಪಿಒ ಇದೇ ರೀತಿಯ ಕರೆ ನೀಡಿತ್ತು. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭರವಸೆಯ ನಂತರ ಇದನ್ನು ಹಿಂಪಡೆಯಲಾಗಿತ್ತು. ನಾಗಾಲ್ಯಾಂಡ್ ಒಂದು ಲೋಕಸಭಾ ಸ್ಥಾನವನ್ನು ಹೊಂದಿದ್ದು, 2018 ರ ಉಪಚುನಾವಣೆಯಿಂದ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯ ಟೋಖೆಹೋ ಯೆಪ್ಥೋಮಿ ಇದನ್ನು ಪ್ರತಿನಿಧಿಸುತ್ತಿದ್ದಾರೆ. ಎನ್‌ಡಿಪಿಪಿ ಬಿಜೆಪಿಯ ಮಿತ್ರಪಕ್ಷವಾಗಿದೆ.

    ಆಂಧ್ರ ಸಿಎಂ ಜಗನ್ ಚಿಕ್ಕಪ್ಪ ಹತ್ಯೆ ಪ್ರಕರಣ: ಹೇಳಿಕೆ ನೀಡದಂತೆ ನ್ಯಾಯಾಲಯ​ ನಿರ್ಬಂಧ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts