More

    ರಾಖಿ ಕಟ್ಟಿದ ಹುಡುಗಿಯನ್ನೇ ಹಾರಿಸಿಕೊಂಡು ಹೋದ! ಸ್ನೇಹಿತನಿಂದಲೇ ನಡೆಯಿತು ಘೋರ ಕೃತ್ಯ

    ಕಲಬುರಗಿ: ಯುವಕನೊಬ್ಬ ತನ್ನ ತಂಗಿಯ ಕೈಯಿಂದ ರಾಖಿ ಕಟ್ಟಿಸಿಕೊಂಡು ಅವಳನ್ನೇ ಹಾರಿಸಿಕೊಂಡು ಹೋಗಿದ್ದ ಹಿನ್ನೆಲೆಯಲ್ಲಿ ಸ್ನೇಹಿತನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಕಲಬುರಗಿಯ ಹೊರವಲಯದ ಕಾಳನೂರ ಧಾಭ ಬಳಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.

    ಕಲಬುರಗಿಯ ಫಿಲ್ಟರ್ ಬೇಡ್ ನಿವಾಸಿ ಆಕಾಶ್ ಪೂಜಾರಿ(22 ವರ್ಷ) ತನ್ನ ಸ್ನೇಹಿತ ಶ್ರೀನಿಧಿ ಎಂಬುವನ ತಂಗಿಯ ಕೈಯಿಂದ ರಾಖಿ ಕಟ್ಟಿಸಿಕೊಂಡಿದ್ದ. ಆದರೆ ನಂತರ ಆಕೆಯನ್ನೇ ಪಟಾಯಿಸಿದ್ದ ಆಕಾಶ್, ಮನೆಯಿಂದ ಓಡಿಸಿಕೊಂಡು ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ.

    ಇದನ್ನೂ ಓದಿ: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ವಕೀಲನಿಗೆ ಸಹಕರಿಸಿದಾತನ ಬಂಧನ

    ಇದರಿಂದ ಕೋಪಗೊಂಡಿದ್ದ ಸ್ನೇಹಿತ ಶ್ರೀನಿಧಿ, ನಿನ್ನೆ ರಾತ್ರಿ ಆಕಾಶ್​ನನ್ನು ಎಣ್ಣೆ ಹಾಕೋದಕ್ಕೆ ಕರೆದುಕೊಂಡು ಹೋಗಿ, ಧಾಭ ಬಳಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕಲಬುರಗಿ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಎನ್​ಸಿಬಿ ಅಧಿಕಾರಿಯ ‘ನಿಕಾಹ್’​ ಫೋಟೋ ಹಾಕಿದ ಮಹಾ ಸಚಿವ; ಸಿಕ್ಕಿತು ಖಡಕ್ ಉತ್ತರ!

    ಮತ್ತೆ ವಕ್ಕರಿಸಿದ ಕರೊನಾ: ಈ ಶಾಲೆಯ 31 ವಿದ್ಯಾರ್ಥಿಗಳಿಗೆ ಸೋಂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts