ಹಾವೇರಿ: ಗುರುವಾರ ಜೈ ಭೀಮ್ ಜೈ ಟಿಪ್ಪು ಸುಲ್ತಾನ್ ಸ್ವಾಭಿಮಾನಿ ಸಮಿತಿ ಜಿಲ್ಲಾ ಘಟಕದ ವತಿಯಿಂದ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ನೇತೃತ್ವದಲ್ಲಿ ಹೆಲ್ಮೆಟ್ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಇನ್ಸ್ಪೆಕ್ಟರ್ ಮೋತಿಲಾಲ ಪವಾರ, ಸಮಿತಿ ಜಿಲ್ಲಾಧ್ಯಕ್ಷ ಲಿಂಗರಾಜ ದಂಡೆಮ್ಮನವರ, ಸುರೇಶ ಚಲವಾದಿ, ರೆಹಮತುಲ್ಲಾ ಮುಲ್ಲಾ, ನಾಗರಾಜ ಕುರುಬರ, ಖಾದರ್ಸಾಬ ಧಾರವಾಡ, ಇತರರಿದ್ದರು.