More

    ಜೆಸಿಐ ಹಾವೇರಿ ಘಟಕದಿಂದ ರಕ್ತದಾನ ಶಿಬಿರ

    ಹಾವೇರಿ: ಜೆಸಿಐ ಹಾವೇರಿ ಘಟಕದ ವತಿಯಿಂದ ನ್ಯಾಶನಲ್ ಇನ್ಸುರೆನ್ಸ್, ಜಿಲ್ಲಾ ರಕ್ತನಿಧಿ ಕೇಂದ್ರ, ರೋಟರಿ ಕ್ಲಬ್ ಹಾಗೂ ಎಸ್‌ಬಿಐ ಇನ್ಸುರೆನ್ಸ್ ಸಹಯೋಗದಲ್ಲಿ ನಗರದ ತಾಲೂಕು ಆರೋಗ್ಯ ಭವನದಲ್ಲಿ ಭಾನುವಾರ ರಕ್ತದಾನ ಶಿಬಿರ ಜರುಗಿತು. ಶಿಬಿರದಲ್ಲಿ 20ಕ್ಕೂ ಅಧಿಕ ದಾನಿಗಳು ರಕ್ತದಾನ ಮಾಡಿದರು. ಹಲವು ಬಾರಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಿದ ಜೆಸಿ ಸಿದ್ದಣ್ಣ ಮೆಣಸಿನಹಾಳ, ಪ್ರದೀಪ ಮುಳ್ಳೂರ, ಮೋಹನ ಹುಲ್ಲತ್ತಿ ಅವರನ್ನು ಸನ್ಮಾನಿಸಲಾಯಿತು. ವೈದ್ಯರ ದಿನಾಚರಣೆ ಅಂಗವಾಗಿ ಡಾ.ಬಸವರಾಜ ತಳವಾರ, ಜೆಸಿ ಡಾ.ದಯಾನಂದ ಸುತ್ತಕೋಟಿ ಅವರನ್ನು ಸನ್ಮಾನಿಸಲಾಯಿತು.
    ಜೆಸಿಐ ಹಾವೇರಿ ಘಟಕದ ಅಧ್ಯಕ್ಷ ಚಂದ್ರಶೇಖರಯ್ಯ ಸುತ್ತೂರಮಠ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ಅಧ್ಯಕ್ಷ ಜೆಸಿ ವೀರಯ್ಯ ಪ್ರಸಾದಿಮಠ ಪ್ರಸ್ತಾವಿಕವಾಗಿ ಮಾತನಾಡಿದರು.
    ಶಿಬಿರದಲ್ಲಿ ಹಾವೇರಿ ಜೆಸಿಐನ ಪೂರ್ವ ಅಧ್ಯಕ್ಷರಾದ ಜೆಸಿ ಕಪಿಲ್ ರಾಠೋಡ, ಜೆಸಿ ಜಗದೀಶ ಚೌಟಗಿ, ಜೆಸಿ ರುಸ್ತುಮ್ ನಂದಿಹಳ್ಳಿ, ಜೆಸಿ ಸುರೇಶ ಕಡಕೋಳ, ಜೆಸಿ ನಾಗರಾಜ ನಡುವಿನಮಠ, ಜೆಸಿ ಎಸ್.ಎಸ್.ದೊಡ್ಡಮನಿ, ಜೆಸಿ ಪ್ರದೀಪ ಪಾಟೀಲ, ಜೆಸಿ ರಾಜು ಚೌಶೆಟ್ಟಿ, ಜೆಸಿ ಮಂಜುನಾಥ ಚೂರಿ ಜೆಸಿ ವೀರಯ್ಯ ಪ್ರಸಾದಿಮಠ, ಖಜಾಂಚಿ ದತ್ತಾತ್ರೇಯ ಜೋಶಿ, ರಾಕೇಶ ಸಿಂಗ್ ಧಾರವಾಡಕರ, ಫಕ್ಕೀರಸ್ವಾಮಿ ಎಸ್.ವಿ., ಹಚ್ಚುಸಾಬ ನದಾಫ, ಶಿವಕುಮಾರ ಕಡೆಕೊಪ್ಪ, ವಿನಾಯಕ ಭಾರಂಗಿ, ನಾಗರಾಜ ದಶಮನಿ, ಕಿರಣಕುಮಾರ ಅರಳಿಕಟ್ಟಿ, ಬಸವರಾಜ ಕಮತದ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts