More

    ಉದ್ಯಮಿಗಳ ಸವಾಲುಗಳ ಅರಿವು ನನಗಿದೆ; ಉದ್ಯಮಶೀಲ ಪ್ರವೃತ್ತಿಯ ಬಣಜಿಗರು ಪ್ರಜ್ಞಾವಂತರು; ಗಡ್ಡದೇವರಮಠ ಶ್ಲಾಘನೆ

    ಹಾವೇರಿ: ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯ ರಂಗ ಪ್ರವೇಶಿಸಿರುವ ನನಗೆ ಉದ್ಯಮಿಗಳ ಸವಾಲುಗಳು ಮತ್ತು ಸಾಧ್ಯತೆಗಳ ಅರಿವಿದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಚುನಾಯಿಸಿದರೆ ತಮ್ಮ ಸೇವೆಗೆ ಬದ್ಧನಾಗಿರುವೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.
    ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಬಣಜಿಗರ ಸಮಾವೇಶದಲ್ಲಿ ಮಾತನಾಡಿದ ಅವರು, ಉದ್ಯಮಶೀಲ ಪ್ರವೃತ್ತಿಯ ಬಣಜಿಗ ಬಾಂಧವರು ಪ್ರಜ್ಞಾವಂತರು ಹಾಗೂ ಸಾಹಸ ಮನೋಭಾವದವರು. ವ್ಯಾಪಾರ ವಹಿವಾಟಿನಲ್ಲಿ ಆಸಕ್ತಿ ಉಳ್ಳವರು. ನಾನೂ ಸಹಿತ ಆಟೋಮೊಬೈಲ್ ಉದ್ಯಮಿ ಆಗಿರುವ ಕಾರಣಕ್ಕೆ ಉದ್ಯಮಿಗಳ ಸಂಕಷ್ಟಗಳನ್ನು ಸಮೀಪದಿಂದ ಗ್ರಹಿಸಿರುವೆ. ತಮ್ಮ ಜತೆಗೆ ಮುನ್ನಡೆಯಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನಗೆ ಆಶೀರ್ವದಿಸಿದರೆ ಸದಾ ತಮ್ಮ ಭಾವನೆಗಳಿಗೆ ಸ್ಪಂದಿಸುವೆ ಎಂದು ಹೇಳಿದರು.
    ಜಿಲ್ಲಾ ಬಣಜಿಗರ ಸಂಘದ ವತಿಯಿಂದ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
    ಬಣಜಿಗ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹೆಸರೂರ, ಚಂದ್ರಣ್ಣ ಶೆಟ್ಟರ್, ಸಿದ್ದಲಿಂಗಪ್ಪ ಮಹಾರಾಜಪೇಟ, ಅಜಿತ ಮಾಗಾವಿ, ಕಿರಣ ಕೊಳ್ಳಿ, ಗುರು ಅಂಗಡಿ, ಪ್ರಕಾಶ ಹಂದ್ರಾಳ, ಪರಸಣ್ಣ ಅಡಕಿ, ರಾಜಣ್ಣ ಕುಂಬಿ, ವಿಜಯಕುಮಾರ ಚಿನ್ನಿಕಟ್ಟಿ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts