More

    ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ

    ಹರಪನಹಳ್ಳಿ: ಪಟ್ಟಣದಲ್ಲಿ ಮಾ.16ರಂದು ತಾಲೂಕು ಕ್ರೀಡಾಂಗಣದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಪೂಜಾರ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಜೆ ಐದಕ್ಕೆ ತಾಲೂಕಿನ ಕಾನಹಳ್ಳಿ ಗ್ರಾಮದಿಂದ ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು. ನಂತರ ಅಮರನಾಥ ಪಾಟೀಲ್, ಸುನೀಲ್ ಮಲ್ಕಪ್ಪ, ಸಿದ್ದೇಶ ಯಾದವರ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. 25 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದರು.

    ರಾಜ್ಯ ಬಿಜೆಪಿ ಸಹಕಾರಿ ಪ್ರಕೋಷ್ಠ ಸಂಚಾಲಕ ಜಿ.ನಂಜನಗೌಡ್ರು, ಯಾತ್ರೆಯ ಸಮಾರೋಪ ದಾವಣಗೆರೆಯಲ್ಲಿ ನಡೆಯಲಿದ್ದು, ನರೇಂದ್ರ ಮೋದಿ ಆಗಮಿಸಲಿದ್ದಾರೆ. ಹರಪನಹಳ್ಳಿ ಸೇರಿದಂತೆ 150ಕ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು. ಬಿಜೆಪಿ ನಾಯಕರಾದ ಸತ್ತೂರು ಹಾಲೇಶ್, ಉದಯಕುಮಾರ, ಎಂ.ಕೆ.ಜಾವೀದ್, ಕಿರಣ್‌ಕುಮಾರ, ಪಿ.ಮಹಾಬಲೇಶ್ವರಗೌಡ, ವಿನಾಯಕ ಭಜಂತ್ರಿ, ಮುತ್ತಿಗಿ ವಾಗೀಶ, ಮಂಜ್ಯನಾಯ್ಕ, ಬಿ.ವೈ.ವೆಂಕಟೇಶ್, ಮಲ್ಲಿಕಾರ್ಜುನ ಮೈದೂರು, ಶಂಕರಪ್ಪ, ಪ್ರಕಾಶ, ಸುರೇಶ, ಓಂಕಾರಗೌಡ, ಎಂ.ಪಿ.ನಾಯ್ಕ, ವಿಜಯಪ್ಪ, ರೇಖಾ ಇತರರಿದ್ದರು.

    ಹರಪನಹಳ್ಳಿಯಲ್ಲಿ ನಡೆಯಲಿರುವ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ ಶೆಟ್ಟರ್, ಸಚಿವರು, ಶಾಸಕರು, ಗಣ್ಯರು ಭಾಗವಹಿಸಲಿದ್ದಾರೆ.
    ಜಿ.ಕರುಣಾಕರರೆಡ್ಡಿ, ಶಾಸಕ, ಹರಪನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts