ಕೊಪ್ಪಳ: ಸಾರಿಗೆ ಬಸ್ ಮೇಲಿದ್ದ ಪುನೀತ್ ರಾಜ್ಕುಮಾರ್ ಫೋಟೊಕ್ಕೆ ಅಜ್ಜಿಯೊಬ್ಬರು ಮುತ್ತಿಟ್ಟು, ಸೆರಗಿನಿಂದ ಅಪ್ಪು ಮುಖ ಸವರಿದ ವಿಡಿಯೋ ಸಖತ್ ವೈರಲ್ ಆಗಿದೆ.
ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಮೇಲಿನ ಜಾಹೀರಾತುವೊಂದರಲ್ಲಿ ಪುನೀತ್ ರಾಜ್ಕುಮಾರ್ರ ಫೋಟೋ ಇದೆ. ಬಸ್ ಮೇಲೆ ಅಪ್ಪು ಫೋಟೋ ನೋಡಿ ಭಾವುಕರಾದ ಅಜ್ಜಿ, ಆ ಫೋಟೋಗೆ ಮುತ್ತಿಟ್ಟು, ಅದರ ಮೇಲೆ ಕೆಲಹೊತ್ತು ತನ್ನ ತಲೆ ಇಟ್ಟು ನಮಿಸಿದ್ದಾರೆ. ಬಳಿಕ ಅಪ್ಪು ಫೋಟೋ ಮೇಲಿದ್ದ ದೂಳನ್ನು ತನ್ನ ಸೆರಗಿನಿಂದ ಸ್ವಚ್ಛಗೊಳಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ದೂರದಿಂದಲೇ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಅಜ್ಜಿ ನೊಂದುಕೊಂಡು ಅಪ್ಪು ಫೋಟೋವನ್ನು ಸೆರಗಿನಿಂದ ಸ್ವಚ್ಛ ಮಾಡಿದ ದೃಶ್ಯ ನೋಡಿದ್ರೆ ಮನಕಲಕುತ್ತೆ, ಹೃದಯ ತುಂಬಾ ಭಾರ ಅನ್ನಿಸುತ್ತೆ… ಈ ಪ್ರೀತಿ, ಅಭಿಮಾನವನ್ನ ವರ್ಣಿಸೋಕೆ ಪದಗಳೇ ಇಲ್ಲ…
ಜಗಮೆಚ್ಚಿದ ‘ಪುನೀತ್’ಗೆ ಇದೆಂಥಾ ಅವಮಾನ? ಅಪ್ಪು ಫೋಟೋ ಮುಂದೆ ಹುಚ್ಚಾಟ ಮೆರೆದ ಚಿತ್ರತಂಡ!
ಅಪ್ಪು-ಅಶ್ವಿನಿ ಪ್ರೀತಿ ಬಗ್ಗೆ ತಂದೆಗೆ ಹೇಳಿದ್ದೇ ಶಿವಣ್ಣ! ಹೀಗಿತ್ತು ಡಾ.ರಾಜ್ ಕುಮಾರ್ ಪ್ರತಿಕ್ರಿಯೆ