More

    ಪ್ರೇಯಸಿಗೆ ಕೈಕೊಟ್ಟು ಮತ್ತೊಬ್ಬಳ ಜತೆ ಸುತ್ತಾಟ; ಇಲಿ ಪಾಷಾಣ ತಿಂದು ಪ್ರಾಣ ಬಿಟ್ಟ ಯುವತಿ

    ಮೈಸೂರು: ತನ್ನನ್ನು ಪ್ರೀತಿಸಿ ಹುಡುಗ ಕೈಕೊಟ್ಟಿದ್ದಕ್ಕೆ ಮನನೊಂದು ಯುವತಿಯೋರ್ವಳು ಡೆತ್​ ನೋಟ್​ ಬರೆದಿಟ್ಟು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್​.ನಗರ ತಾಲ್ಲೂಕಿನ ಗೌಡನಹಳ್ಳಿಯಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ನಿಸರ್ಗ(20) ಎಂದು ಗುರುತಿಸಲಾಗಿದ್ದು, ಈಕೆ ಕೆ.ಆರ್​.ನಗರ ಪ್ರಥಮಿ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷ ಬಿಕಾಂ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ನಾಲ್ಕು ವರ್ಷಗಳ ಪ್ರೀತಿ

    ನಿಸರ್ಗ ತನ್ನದೇ ಕಾಲೇಜಿನಲ್ಲಿ ಒದುತ್ತಿದ್ದ ಸುಹಾಸ್​ ಎಂಬುವವನ ಜೊತೆ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗುತ್ತದೆ. ನಾಲ್ಕು ವರ್ಷಗಳು ಇವರು ಜೊತೆಯಾಗಿ ತರಿಗಾಡುತ್ತಾರೆ. ಆದರೆ, ದಿನ ಕಳೆದಂತೆ ಪ್ರಿಯತಮನ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿದ ನಿಸರ್ಗ ಆತ ಅನನ್ಯಾ ಎಂಬ ಯುವತಿಯೊಂದಿಗೆ ಸ್ನೇಹ ಬೆಳೆಸಿರುವುದು ತಿಳಿದು ಬರುತ್ತದೆ.

    NIsha

    ಇದನ್ನೂ ಓದಿ: ಕಲುಷಿತಗೊಂಡ ಇವತ್ತಿನ ರಾಜಕಾರಣ: ಸಚಿವ ಜಿ.ಪರಮೇಶ್ವರ್ ಕಳವಳ

    ಈ ವಿಚಾರ ತಿಳಿದು ನಿಸರ್ಗ ಮಾನಸಿಕ ಖಿನ್ನತೆಗೊಳಗಾಗಿ ಕೈ ಕೊಯ್ದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋವನ್ನು ಪೋಸ್ಟ್​ ಮಾಡಿದ್ದಳು. ಈ ವಿಚಾರವನ್ನು ಅನನ್ಯಾ ಪೋಷಕರಿಗೂ ಸಹ ತಿಳಿಸಿದ್ದಾಳೆ. ಆದರೆ, ಅನನ್ಯಾ ಪೋಷಕರು ನಿಸರ್ಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾಯುವಂತೆ ಪ್ರೇರೇಪಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

    ಇಲಿ ಪಾಷಾಣ ಸೇವನೆ

    ಇದರಿಂದ ತೀವ್ರವಾಗಿ ಮನನೊಂದಿದ್ದ ನಿಸರ್ಗ ಡೆತ್​ನೋಟ್​ ಬರೆದಿಟ್ಟು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಅಸ್ವಸ್ಥಳನ್ನು ಆಸ್ಪತ್ರೆಗೆ ದಾಖಲಿಸಿಲಾಯಿತಾದರೂ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಸುಹಾಸ್​ ತಲೆಮಾರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

    ಈ ಸಂಬಂಧ ಕೆ.ಆರ್.ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿ ಸುಹಾಸ್​, ಯುವತಿ ಅನನ್ಯಾ ಹಾಗೂ ಆಕೆಯ ಪೋಷಕರ ವಿರುದ್ಧ FIR ದಾಖಲಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts