ನವದೆಹಲಿ: 2021ರ ಐಪಿಎಲ್ಗೆ ಭರ್ಜರಿ ಸಿದ್ಧತೆ ಆರಂಭವಾಗಿದೆ. ಈಗಾಗಲೇ ಎಲ್ಲ ತಂಡಗಳು ತಮ್ಮ ಪ್ಲೇಯರ್ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದ ಆರ್ಸಿಬಿಗೆ ಎಂದಿನಂತೆ ಈ ಬಾರಿಯೂ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿರಲಿದ್ದಾರೆ ಎಂದು ಹೇಳಲಾಗಿದೆ. ಹೀಗಿರುವಾಗಲೇ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಕೊಹ್ಲಿ ಬಗ್ಗೆ ಒಂದು ಹೇಳಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಸದ್ಯಕ್ಕಿಲ್ಲ ಎಲೆಕ್ಷನ್! ಇನ್ನೂ ನಾಲ್ಕು ತಿಂಗಳು ಸೋನಿಯಾ ಗಾಂಧಿಯೇ ಅಧ್ಯಕ್ಷೆ
ಎಂಟು ವರ್ಷಗಳಿಂದ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಈಗಾಗಲೇ ಸಾಕಷ್ಟು ಸಮಯವಾಗಿದೆ. ಅಂತಹ ಕ್ಯಾಪ್ಟನ್ ಯಾರಿದ್ದಾರೆ ಹೇಳಿ. ಕ್ಯಾಪ್ಟನ್ ಬದಿಗಿರಲಿ, ಎಂಟು ವರ್ಷಗಳಿಂದ ಆಡಿದರೂ ಒಂದೇ ಒಂದು ಸಲವೂ ಟ್ರೋಫಿ ಗೆಲ್ಲದ ಆಟಗಾರರಿದ್ದಾರೆಯೇ? ತಂಡದ ಸೋಲಿಗೆ ಕ್ಯಾಪ್ಟನ್ ಜವಾಬ್ದಾರನಾಗಬೇಕು. ಎಂಟು ವರ್ಷದಿಂದ ಆರ್ಸಿಬಿ ಸೋಲು ಕಾಣುತ್ತಿರುವುದರ ಜವಾಬ್ದಾರಿಯನ್ನು ಕೊಹ್ಲಿ ಹೊತ್ತುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಐಪಿಎಲ್ ಹರಾಜಿಗೆ ಮುನ್ನ ಆರ್ಸಿಬಿ ತಂಡದಿಂದ ಯಾರು ಔಟ್, ಯಾರು ಸೇಫ್?
ಆರ್ಸಿಬಿ ಫ್ಯಾಂಚೈಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕಳೆದ ವರ್ಷ ಆಡಿದ್ದ ಬಹುತೇಕರನ್ನು ಉಳಿಸಿಕೊಳ್ಳಲಾಗಿದ್ದು, ಕೆಲವರನ್ನು ಕೈ ಬಿಡಲಾಗಿದೆ. 360 ಡಿಗ್ರಿ ಖ್ಯಾತಿಯ ಎಬಿ ಡೆ ವಿಲಿಯರ್ಸ್, ಸ್ಪಿನ್ನರ್ ಯಜುವೆಂದರ್ ಚಹಲ್, ವಾಷಿಂಗ್ಟನ್ ಸುಂದರ್, ಮೊಹಮದ್ ಸಿರಾಜ್, ನವದೀಪ್ ಸೈನಿ, ಅಡಮ್ ಜಾಂಪ, ಶಾಬಾಜ್ ಅಹಮದ್, ಜೋಷ್ ಫಿಲಿಪಿ, ಕೇನ್ ರಿಚರ್ಡಸನ್, ಕರ್ನಾಟಕದ ದೇವದತ್ ಪಡಿಕಲ್ ಮತ್ತು ಪವನ್ ದೇಶಪಾಂಡೆ ಆರ್ಸಿಬಿಯ ಪಟ್ಟಿಯಲ್ಲಿದ್ದಾರೆ. ಕ್ರಿಸ್ ಮೋರಿಸ್ ಮತ್ತು ಆರನ್ ಫಿಂಚ್ರನ್ನು ತಂಡ ಈ ಬಾರಿ ಬಿಟ್ಟುಕೊಟ್ಟಿದೆ. ಅವರ ಜತೆ ಮೊಯೀನ್ ಅಲಿ, ಇಸುರು ಉದಾನಾ, ಡೇಲ್ ಸ್ಟೇನ್, ಶಿವಮ್ ದೂಬೆ, ಉಮೇಶ್ ಯಾದವ್, ಪವನ್ ನೇಗಿ, ಗುರ್ಕೀರತ್ ಮನ್, ಪಾರ್ಥಿವ್ ಪಟೇಲ್ ಕೂಡ ತಂಡದ ಪಟ್ಟಿಯಿಂದ ಹೊರಗುಳಿದಿದ್ದಾರೆ. (ಏಜೆನ್ಸೀಸ್)