ನವದೆಹಲಿ: ಭಾರತದಲ್ಲಿ ಕರೊನಾ ಕೇಸ್ 7 ಲಕ್ಷದ ಗಡಿ ದಾಟಿದೆ. ದೇಶದಲ್ಲಿ ದಿನೇದಿನೆ ಕರೊನಾ ಸೋಂಕಿತರ ಸಂಖ್ಯೆ ಏರುತ್ತಿದ್ದರೂ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ.
ಇದೀಗ ಆರೋಗ್ಯ ಇಲಾಖೆ ದೇಶದಲ್ಲಿ ಸಕ್ರಿಯ ಕರೊನಾ ಕೇಸ್ಗಳ ಸಂಖ್ಯೆ ಹಾಗೂ ಸೋಂಕಿನಿಂತ ಚೇತರಿಸಿಕೊಂಡವರ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಹಾಗೇ, ಸಕ್ರಿಯ ಪ್ರಕರಣಗಳು ಮತ್ತು ಚೇತರಿಸಿಕೊಳ್ಳುವವರ ಸಂಖ್ಯೆಯ ನಡುವಿನ ಅಂತರ ಹೆಚ್ಚುತ್ತಲೇ ಇದೆ ತಿಳಿಸಿದೆ.
ಆರೋಗ್ಯ ಇಲಾಖೆಯ ಸ್ಪೆಶಲ್ ಡ್ಯೂಟಿ ಆಫೀಸರ್ ಆಗಿರುವ ರಾಜೇಶ್ ಭೂಷಣ್ ಅವರು ಸುದ್ದಿಗೋಷ್ಠಿ ನಡೆಸಿದ್ದು, ದೇಶದಲ್ಲಿ ಒಟ್ಟು 269,789 ಕೊವಿಡ್-19ಸಕ್ರಿಯ ಕೇಸ್ಗಳಿವೆ. ಹಾಗೇ 4,76, 378 ಕೊವಿಡ್-19 ವೈರಸ್ನಿಂದ ಚೇತರಿಸಿಕೊಂಡು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣದ ಸಂಖ್ಯೆ ಹಾಗೂ ಗುಣಮುಖರಾದವರ ಸಂಖ್ಯೆಯ ನಡುವೆ ಅಂತರ ಜಾಸ್ತಿಯಾಗುತ್ತಲೇ ಇದೆ. ಇದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ. ಇದನ್ನೂ ಓದಿ: ನಟ ಪ್ರಭಾಸ್ ತೆಗೆದುಕೊಂಡ ಈ ನಿರ್ಧಾರ ಕನ್ನಡಿಗರನ್ನು ಕೆಣಕುವಂತಿದೆ!
ಹಾಗೇ, ದೇಶದಲ್ಲಿ ಕೊವಿಡ್-19ನಿಂದ ಚೇತರಿಸಿಕೊಳ್ಳುತ್ತಿರುವ ಪ್ರಮಾಣ ಶೇ.62.09ರಷ್ಟಾಗಿದೆ. ಈ ದರ ಗಣನೀಯವಾಗಿ ಹೆಚ್ಚುತ್ತಿದೆ. ಸಕ್ರಿಯ ಪ್ರಕರಣಗಳಿಗಿಂತ, ರಿಕವರಿ ರೇಟ್ ಸುಮಾರು 2 ಪಟ್ಟು ಹೆಚ್ಚಿದೆ ಎಂದು ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.8ರಷ್ಟು 60 ರಿಂದ 74 ವರ್ಷದವರು ಇದ್ದಾರೆ. ಕೊವಿಡ್-19ನಿಂದ ಈ ವಯಸ್ಸಿನವರೇ ಶೇ.39ರಷ್ಟು ಮೃತರಾಗುತ್ತಿದ್ದಾರೆ. ಇನ್ನು ಶೇ.14ರಷ್ಟು 75ವರ್ಷಕ್ಕಿಂತ ಮೇಲ್ಪಟ್ಟವರು ಕೊವಿಡ್-19ನಿಂದ ಸಾಯುತ್ತಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)
ಪೊಲೀಸರ ಶವ ಸುಟ್ಟು ಸಾಕ್ಷ್ಯ ನಾಶ ಮಾಡಬೇಕೆಂದಿದ್ದೆ, ಸಾಧ್ಯವಾಗಲಿಲ್ಲ ಪರಾರಿಯಾದೆ!