More

    ಗಂಗಾವತಿ ಸಾಹಿತ್ಯ ಸಮ್ಮೇಳನ: ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿ

    ಗಂಗಾವತಿ: ನಗರದ ಬಾಲಕರ ಪಪೂ ಕಾಲೇಜು ಮೈದಾನದಲ್ಲಿ ಮಾ.6 ಮತ್ತು 7ರಂದು ಆಯೋಜಿಸಿರುವ ತಾಲೂಕು 8ನೇ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪುಸ್ತಕ ಬಿಡುಗಡೆಗಾಗಿ ಹೆಸರು ನೋಂದಾಯಿಸಬಹುದು ಎಂದು ಕಸಾಪ ತಾಲೂಕಾಧ್ಯಕ್ಷ ಶ್ರೀನಿವಾಸ ಅಂಗಡಿ ತಿಳಿಸಿದ್ದಾರೆ.

    ಎರಡು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ತಾಲೂಕಿನ ಕಲಾ ತಂಡಗಳು ಭಾಗವಹಿಸಬಹುದು. ನಾಡು, ನುಡಿ, ಜಲ, ನೆಲ ಬಿಂಬಿಸುವ ಕಾರ್ಯಕ್ರಮಗಳಿಗೆ ಅವಕಾಶವಿದೆ. ಅಸಕ್ತರು ೆ.25ರೊಳಗೆ ಹೆಸರು ನೋಂದಾಯಿಸಬೇಕು. ಮಾಹಿತಿಗೆ ಮೈಲಾರಪ್ಪ ಬೂದಿಹಾಳ್( 98809 42764), ಸುಧಾತಾಯಿ ಬಡಿಗೇರ (89700 70066)ರನ್ನು ಸಂಪರ್ಕಿಸಬೇಕು. ಅದರಂತೆ ತಾಲೂಕಿನ ಬರಹಗಾರರು, ಸಾಹಿತ್ಯಾಸಕ್ತರು ಹೊರತರಲಿರುವ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವಿದ್ದು, ಹೊಸ ಪುಸ್ತಕಗಳಿಗೆ ಅವಕಾಶವಿದೆ. ಮಾಹಿತಿಗೆ ಸುರೇಶ ಕಲಾಪ್ರಿಯಾ (96111 70560)ರನ್ನು ಸಂಪರ್ಕಿಸುವಂತೆ ಶ್ರೀನಿವಾಸ ಅಂಗಡಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts