ಬೆಂಗಳೂರು: ಬ್ಯಾಟರಾಯನಪುರದ ಬಳಿ ಇರುವ ಪ್ರಸಿದ್ಧ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ ಕಳವು ನಡೆದಿದೆ.
ಗೋಡೆ ಹತ್ತಿ ದೇವಾಲಯ ಪ್ರವೇಶ ಮಾಡಿದ ಕಳ್ಳರು ಲಾಕರ್ ಮುರಿದು 48 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.
ಧನುರ್ಮಾಸದ ಪ್ರಯುಕ್ತ ನಡೆದ ಇರುಮುಡಿ ಸೇವೆಯಿಂದ ಸಂಗ್ರಹವಾದ ಹಣವನ್ನು ಲಾಕರ್ನಲ್ಲಿ ಇಡಲಾಗಿತ್ತು. ದೇವಾಲಯದ ಟ್ರಸ್ಟಿ ಮಂಜುನಾಥ್ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್)