ವಿಜಯವಾಣಿ ಸುದ್ದಿಜಾಲ ಗದಗ
ಕಾಂಗ್ರೆಸ್ ಸರ್ಕಾರ ರಚನೆಯಾಗಿ ಹಲವು ತಿಂಗಳು ಕಳೆದಿವೆ. ರಾಜ್ಯದ ಜನತೆ ಬರಗಾಲದ ಚಾಯೆಯಲ್ಲಿ ಬೆಂದು ಹೋಗುತ್ತಿದ್ದರೂ ಬರ ಪರಿಹಾರ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಲವಾಗಿದೆ. ಜನಪ್ರತಿದಿಗಳು ಈ ಬಗ್ಗೆ ಏಕೆ ಗಮನ ಹರಿಸುತ್ತಿಲ್ಲ ಎಂದು ಬಿಜಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಆರೋಪಿಸಿದರು.
ಬರಗಾಲ ಕುರಿತು ಕಾಂಗ್ರೆಸ್ ಸರ್ಕಾರ ಸೂಕ್ತವಾಗಿ ಸ್ಪಂಧಿಸುತ್ತಿಲ್ಲ ಎಮದು ಆರೋಪಿಸಿ ಬಿಜೆಪಿ ಜಿಲ್ಲಾ ಟಕದಿಂದ ಗದಗ ಕ್ಷೇತ್ರದ ಶಾಸಕ, ಸಚಿವ ಎಚ್. ಕೆ.ಪಾಟೀಲರಿಗೆ “ೇತ್ರದ ಶಾಸಕರೆ ನಿಮ್ಮ ಅಧಿಕೃತ ಕಚೇರಿ ವಿಳಾಸ ಕೊಡಿ’ ಎಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪತ್ರ ನೀಡಿ, ಕಾಂಗ್ರೆಸ್ ಸಕಾರದ ವಿರುದ್ಧ ರಾಜು ಕುರಡಗಿ ಆರೋಪದ ಸುರಿಮಳೆ ಗೈದರು.
ಬರಪರಿಹಾರ ೂಷಣೆ ಆಗಿಲ್ಲ. ರೈತರಿಗೆ ನೀಡುತ್ತಿರುವಂತ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಲಾಗಿದೆ. ಧನ&ಕರುಗಳಿಗೆ ಮತ್ತು ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದೆ. ನಗರದಲ್ಲಿ 30 ವರ್ಷಗಳಿಂದ ಕುಡಿಯುವ ನೀರಿನ ಅಭಾವವಿದ್ದರೂ ಸಹಿತ ಇಲ್ಲಿಯವರೆಗೆ ಜನತೆಗೆ ಕುಡಿಯುವ ನೀರಿನ ಸುಳ್ಳು ಭರವಸೆ ನೀಡಲಾಗುತ್ತಿದೆ. ಕಾಂಗ್ರೆಸ್ ಉದ್ಘಾಟನೆ ಮಾಡುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಹಿಂದಿನ ಸರ್ಕಾರವಿದ್ದಾಗ ಉದ್ಘಾಟನೆ ಹಂತಕ್ಕೆ ಬಂದ ಕಾಮಗಾರಿಗಳೇ ಆಗಿರುತ್ತವೆ. ಅಧಿಕಾರಕ್ಕೆ ಬಂದು ಹಲವು ತಿಂಗಳುಗಳೇ ಕಳೆದರು ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಯಾವುದೆ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ಆರೋಪಿಸಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಗದಗ&ಬೆಟಗೇರಿ ನಗರಸಭೆ ಅಧ್ಯೆ ಉಷಾದಾಸರ, ಉಪಾಧ್ಯೆ ಸುನಂದಾ ಬಾಕಳೆ, ಜಿಲ್ಲಾ ಪ್ರಧಾನ ಕಾರ್ಯದಶಿರ್ ಪಕ್ಕಿರೇಶ ರಟ್ಟಿಹಳ್ಳಿ, ಎಂ.ಎಸ್.ಕರೀಗೌಡ್ರ, ಎಂ.ಎಂ.ಹಿರೇಮಠ, ಜಗನ್ನಾಥಸಾ ಭಾಂಡಗೆ, ಅಶೋಕ ಸಂಕಣ್ಣವರ, ಅನೀಲ ಅಬ್ಬಿಗೇರಿ ಹಲವರು ಇದ್ದರು.