More

    ಇನ್ನೈದು ವರ್ಷಗಳಲ್ಲಿ ರಾಜ್ಯದ 4 ಕಡೆ ಹಜ್ ಭವನ ನಿರ್ಮಾಣ: ಸಚಿವ ಜಮೀರ್ ಅಹ್ಮದ್

    ಬೆಂಗಳೂರು: ರಾಜ್ಯದಲ್ಲಿ ಇನ್ನೈದು ವರ್ಷಗಳಲ್ಲಿ ನಾಲ್ಕು ಕಡೆ ಹಜ್​ ಭವನ ನಿರ್ಮಾಣ ಮಾಡಲಾಗುವುದು ಎಂದು ವಸತಿ ಮತ್ತು ವಕ್ಫ್​ ಸಚಿವ ಜಮೀರ್ ಅಹ್ಮದ್ ಖಾನ್​ ಹೇಳಿದ್ದಾರೆ. 2023ನೇ‌ ಸಾಲಿನ ಹಜ್ ಯಾತ್ರಿಕರ ವಿಮಾನಯಾನ ಉದ್ಘಾಟನಾ ಕಾರ್ಯಕ್ರಮ ಇಂದು ಯಲಹಂಕದ ಹಜ್ ಭವನದಲ್ಲಿ ನಡೆಯುತ್ತಿದ್ದು, ಅದರಲ್ಲಿ ಪಾಲ್ಗೊಂಡಿದ್ದ ಜಮೀರ್ ಈ ವಿಷಯ ತಿಳಿಸಿದರು.

    ಇಡೀ‌ ಭಾರತದಲ್ಲಿ ಯಲಹಂಕ ಸಮೀಪದ ಹಜ್ ಭವನ ಮಾದರಿಯಾದದ್ದು. ಇಷ್ಟು ಸುವ್ಯವಸ್ಥೆ ಇರುವ ಹಜ್ ಭವನ‌ ಬೇರೆಲ್ಲೂ ಇಲ್ಲ. ಈಗ ಈ ಹಜ್ ಭವನದಲ್ಲಿ ಸ್ವಯಂಸೇವಕರಾಗಿ ನೂರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಹಜ್‌ ಯಾತ್ರಾರ್ಥಿಗಳ‌ ಪ್ರವಾಸಕ್ಕೆ ಅಗತ್ಯ ಸಹಕರಿಸುತ್ತಿದ್ದಾರೆ. ಈ ಸ್ವಯಂಸೇವಕರನ್ನ ನನ್ನ ವೈಯಕ್ತಿಕ ಹಣದಲ್ಲಿ ಹಜ್​ಗೆ ಕಳಿಸಿಕೊಡುವುದಾಗಿ ಜಮೀರ್ ಅಹ್ಮದ್ ಹೇಳಿದರು.

    ಇದನ್ನೂ ಓದಿ: ಐಪಿಎಸ್​-ಐಎಎಸ್ ಸಂಘರ್ಷ: ಜಾಮೀನು ಪಡೆದ ರೂಪಾ ಮೌದ್ಗಿಲ್

    ಹಜ್ ಭವನದ ನಿರ್ಮಾಣದ ಹಿಂದೆ ರೋಷನ್ ಬೇಗ್ ಅವರ ಶ್ರಮ ಬಹಳಷ್ಟಿದೆ. ಸಿದ್ದರಾಮಯ್ಯ ಅವರು ಈ ಹಿಂದೆ ಸಿಎಂ ಆಗಿದ್ದಾಗ 100 ಕೋಟಿ ರೂ. ಅನುದಾನ‌ ನೀಡಿದ್ದರು ಎಂಬುದನ್ನು ನೆನಪಿಸಿಕೊಂಡ ಜಮೀರ್, ಇನ್ನು ಐದು‌ ವರ್ಷಗಳಲ್ಲಿ ರಾಜ್ಯದ 4 ಕಡೆ ಹಜ್ ಭವನ‌ ತಲೆ ಎತ್ತಲಿವೆ ಎಂದರು. ಈ ಬಾರಿ‌ ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ಹಜ್ ಭವನ ನವೀಕರಣಕ್ಕೆ ಸಿಎಂ 5 ಕೋಟಿ ರೂ. ನೀಡಿದ್ದಾರೆ. ಐದು ಸಾವಿರ ಕೋಟಿ ಕೊಡುವುದಾಗಿ ಘೋಷಣೆಯನ್ನೂ ಮಾಡಿದ್ದೀರಿ. ಯಾವುದೇ ಕಾರಣಕ್ಕೂ 5 ಸಾವಿರ ಕೋಟಿಯಲ್ಲಿ‌ ಹಣ ಕಡಿಮೆ‌ ಮಾಡಬಾರದು ಅಂತ ಮುಸ್ಲಿಂ ಧಾರ್ಮಿಕ‌ ಮುಖಂಡರ ಬೇಡಿಕೆ ಇದೆ ಎಂದೂ ಜಮೀರ್ ಹೇಳಿದರು.

    ಇದನ್ನೂ ಓದಿ: ವಿಧಾನಪರಿಷತ್ ಉಪ ಚುನಾವಣೆಗೆ ದಿನಾಂಕ ಘೋಷಣೆ; ಇಲ್ಲಿದೆ ಪೂರ್ತಿ ವಿವರ..

    2023ನೇ‌ ಸಾಲಿನ ಹಜ್ ಯಾತ್ರಿಕರ ವಿಮಾನಯಾನ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಸಚಿವರಾದ ಜಮೀರ್ ಅಹ್ಮದ್ ಖಾನ್, ಕೆ.ಎಚ್.ಮುನಿಯಪ್ಪ, ಕೃಷ್ಣಬೈರೇಗೌಡ, ಎಂಎಲ್​ಸಿ ಸಲೀಂ ಅಹ್ಮದ್, ‌ಹಜ್ ಸಚಿವ‌ ರಹೀಂ ಖಾನ್, ಮಾಜಿ ಸಚಿವ ರೋಷನ್‌ ಬೇಗ್‌ ಮುಂತಾದವರಿದ್ದರು.

    ಇಂದಿನಿಂದ ಜೂ. 22ರ ವರೆಗೆ ಕರ್ನಾಟಕದಿಂದ ಒಟ್ಟು 7 ಸಾವಿರ ಹಜ್‌ ಯಾತ್ರಾರ್ಥಿಗಳು ಪ್ರಯಾಣಿಸಲಿದ್ದು, ಯಾತ್ರೆಗೆ ತೆರಳಲಿರುವವರಿಗಾಗಿ 51 ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಾಗಿದೆ.

    ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ

    ವಿಂಗ್ ಹೆಸರಲ್ಲಿ ಅಮಾಯಕ ಹಿಂದು ಹುಡುಗರನ್ನು ತಡೆದರೆ ಪರಿಣಾಮ ನೆಟ್ಟಗಿರಲ್ಲ: ವಜ್ರದೇಹಿ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts