ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಿಂದ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಚನ್ನಪಟ್ಟಣದ ಜತೆಗೆ ಮಂಡ್ಯ ಕ್ಷೇತ್ರದಿಂದಲೂ ಎಚ್ಡಿಕೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿ ಫಾರಂ ನೀಡಿಲ್ಲ
ಮಂಡ್ಯದಿಂದ ಎಚ್ಡಿಕೆ ನಾಮಪತ್ರ ಸಲ್ಲಿಕೆಗೆ ಸದ್ದಿಲ್ಲದೆ ತಯಾರಿ ನಡೆಯುತ್ತಿದೆಯಂತೆ. ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕ ಹತ್ತಿರವಾಗುತ್ತಿದ್ದರೂ ಮಂಡ್ಯ ಜೆಡಿಎಸ್ ಟಿಕೆಟ್ ಸಮಸ್ಯೆ ಇನ್ನು ಬಗೆಹರಿದಿಲ್ಲ. ಹಾಲಿ ಶಾಸಕ ಎಂ.ಶ್ರೀನಿವಾಸ್ ಹೆಸರು ಘೋಷಣೆಯಾಗಿದ್ದರೂ ಜೆಡಿಎಸ್ ವರಿಷ್ಠರು ಇನ್ನೂ ಬಿ ಫಾರಂ ನೀಡಿಲ್ಲ.
ಇದನ್ನೂ ಓದಿ: ಆರೋಪಗಳ ಸುಳಿಯಲ್ಲಿ ಖಾಕಿ! ಲಂಚ, ಲೈಂಗಿಕ ಕಿರುಕುಳ, ಬೆಳೆಯುತ್ತಿದೆ ಅಮಾನತುಗೊಳ್ಳವವರ ಪಟ್ಟಿ
ಕ್ಷೇತ್ರ ತ್ಯಾಗ
ಮಾಜಿ ಸಿಎಂ ಎಚ್ಡಿಕೆ ಸ್ಪರ್ಧಿಸಿದ್ರೆ ಕ್ಷೇತ್ರ ತ್ಯಾಗಕ್ಕೆ ಎಂ.ಶ್ರೀನಿವಾಸ್ ಸಿದ್ಧರಾಗಿದ್ದಾರೆ. ವಯಸ್ಸು ಮತ್ತು ಅನಾರೋಗ್ಯ ಕಾರಣ ಎಂ.ಶ್ರೀನಿವಾಸ್ಗೆ ಕೋಕ್ ನೀಡಲಾಗಿದೆ. ಇದರ ನಡುವೆ ಜಯಾನಂದ ಹಾಗೂ ಮನ್ಮುಲ್ ರಾಮಚಂದ್ರು ಟಿಕೆಟ್ ರೇಸ್ನಲ್ಲಿದ್ದಾರೆ. ಎಂ.ಶ್ರೀನಿವಾಸ್ ಅಳಿಯ ಎಚ್.ಎನ್.ಯೋಗೇಶ್ ಕೂಡ ಟಿಕೆಟ್ಗಾಗಿ ಫೈಟ್ ಮಾಡುತ್ತಿದ್ದಾರೆ. ಯಾರಿಗೆ ಟಿಕೆಟ್ ನೀಡಿದ್ರು ಬಂಡಾಯ ಸಾಧ್ಯತೆ ಹಿನ್ನೆಲೆಯಲ್ಲಿ ಸ್ವತಃ ಕುಮಾರಸ್ವಾಮಿಯೇ ಕಣಕ್ಕಿಯಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
7 ಕ್ಷೇತ್ರಗಳಲ್ಲೂ ಗೆಲುವಿನ ಅಭಿಪ್ರಾಯ
ಮಂಡ್ಯದಿಂದ ಎಚ್ಡಿಕೆ ಸ್ಪರ್ಧಿಸಿದ್ರೆ ಜಿಲ್ಲೆಯ ಇತರೆ ಕ್ಷೇತ್ರಗಳಲ್ಲೂ ಪ್ರಭಾವ ಬೀರುವ ಲೆಕ್ಕಾಚಾರ ಇದೆ. 7ಕ್ಕೆ 7 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಬಹುದೆಂಬ ಅಭಿಪ್ರಾಯವನ್ನು ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ. ಇಂದು ಮಂಡ್ಯಕ್ಕೆ ಎಚ್ಡಿಕೆ ಭೇಟಿ ನೀಡಲಿದ್ದಾರೆ. ಶ್ರೀರಂಗಪಟ್ಟಣ ಹಾಗೂ ಪಾಂಡವಪುರದಲ್ಲಿ ಎಚ್ಡಿಕೆ ಪ್ರವಾಸ ಮಾಡಲಿದ್ದಾರೆ.
ಎಚ್ಡಿಕೆ ಸಾಥ್
ನಾಮಪತ್ರ ಸಲ್ಲಿಕೆ ವೇಳೆ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಎಚ್ಡಿಕೆ ಸಾಥ್ ನೀಡಲಿದ್ದಾರೆ. ನಂತರ ಶ್ರೀರಂಗಪಟ್ಟಣದಲ್ಲಿ ಬೃಹತ್ ರ್ಯಾಲಿ ನಡೆಯಲಿದೆ. ಬಳಿಕ ಪಾಂಡವಪುರದಲ್ಲಿ ನಡೆಯುವ ಬೃಹತ್ ಬಹಿರಂಗ ಸಭೆಯಲ್ಲಿ ಎಚ್ಡಿಕೆ ಭಾಗಿಯಾಗಲಿದ್ದಾರೆ. ಶಾಸಕ ಸಿ.ಎಸ್. ಪುಟ್ಟರಾಜು ನಾಮಪತ್ರ ಸಲ್ಲಿಕೆ ವೇಳೆಯು ಎಚ್ಡಿಕೆ ಭಾಗಿಯಾಗಲಿದ್ದಾರೆ.
ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ಚರ್ಚೆ ಬೆನ್ನಲ್ಲೇ ಎಚ್ಡಿಕೆ ಜಿಲ್ಲೆಗೆ ಬರುತ್ತಿದ್ದು, ಕಾರ್ಯಕರ್ತರಲ್ಲಿ ಎಚ್ಡಿಕೆ ನಡೆ ಕುತೂಹಲ ಮೂಡಿಸಿದೆ. (ದಿಗ್ವಿಜಯ ನ್ಯೂಸ್)
ಆರೋಪಗಳ ಸುಳಿಯಲ್ಲಿ ಖಾಕಿ! ಲಂಚ, ಲೈಂಗಿಕ ಕಿರುಕುಳ, ಬೆಳೆಯುತ್ತಿದೆ ಅಮಾನತುಗೊಳ್ಳವವರ ಪಟ್ಟಿ
500 ವರ್ಷಗಳ ಹಿಂದೆ ನಿರ್ಮಾಣವಾದ ಮ್ಯಾಜಿಕಲ್ ಬಾವಿಯ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುವುದು ಗ್ಯಾರೆಂಟಿ!
ರಾಮದಾಸ್ ಕೂಡ ಬಿಜೆಪಿಗೆ ರಾಜೀನಾಮೆ?; ಮನೆಗೆ ಬಂದ ಸಂಸದ-ಅಭ್ಯರ್ಥಿಯನ್ನು ಭೇಟಿಯಾಗದೆ ವಾಪಸ್ ಕಳಿಸಿದ್ರು!