More

    ಬಾಡುತ್ತಿರುವ ಗಿಡಗಳಿಗೆ ಜೀವಕಳೆ

    ಯಲಬುರ್ಗಾ: ಬಿಸಿಲಿನ ತಾಪ ಫೆಬ್ರವರಿ ತಿಂಗಳಿಂದಲೇ ಹೆಚ್ಚಾಗಿದೆ. ಹೀಗಾಗಿ ರಸ್ತೆಬದಿ ನೆಡಲಾದ ನೆಡುತೋಪುಗಳು ಬಾಡಲಾರಂಭಿಸಿದ್ದು, ಅರಣ್ಯ ಇಲಾಖೆ ಟ್ಯಾಂಕರ್ ನೀರು ಪೂರೈಸುವ ಮೂಲಕ ಗಿಡಗಳಿಗೆ ಜೀವಕಳೆ ತಂದಿದೆ.

    ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಿಂದ ವಣಗೇರಿ ರಸ್ತೆಬದಿ 2022-23ನೇ ಸಾಲಿನಲ್ಲಿ 900 ಸಸಿ, ಕುಡಗುಂಟಿ-ಬಳಗೇರಿ ರಸ್ತೆಬದಿ 2023-24ನೇ ಸಾಲಿನಲ್ಲಿ 900 ಸಸಿಗಳನ್ನು ನೆಡಲಾಗಿದೆ. ಪರಿಸರ ರಕ್ಷಣೆ, ಜನ ಜಾನುವಾರುಗಳಿಗೆ ನೆರಳಿನ ಆಸರೆ ನೀಡಲು ಸಸಿಗಳನ್ನು ಬೆಳೆಸಲಾಗಿದ್ದು, ಮಳೆ ಕೊರತೆಯಿಂದ ಒಣಗಲು ಆರಂಭಿಸಿವೆ. ಗಿಡಗಳನ್ನು ಉಳಿಸಿಕೊಳ್ಳಲು ಅರಣ್ಯ ಇಲಾಖೆಯು ಖಾಸಗಿ ಬೋರ್‌ವೆಲ್‌ಗಳಿಂದ ಟ್ಯಾಂಕರ್‌ವೊಂದಕ್ಕೆ 300 ರಿಂದ 350 ರೂ. ಖರ್ಚು ಮಾಡಿ ನೀರುಣಿಸುತ್ತಿದೆ. ಗಿಡಗಳ ಸುತ್ತಲೂ ಬೆಳೆದ ಕಸ ಸ್ವಚ್ಛಗೊಳಿಸಿ, ಜನ ಜಾನುವಾರುಗಳಿಂದ ರಕ್ಷಿಸಲು ಮುಳ್ಳಿನಿಂದ ರಕ್ಷಣೆ ಬೇಲಿ ರಚಿಸಲಾಗುತ್ತಿದೆ.

    ವಿವಿಧ ಗಿಡಗಳು: ಅರಣ್ಯ ಇಲಾಖೆಯಿಂದ ರಸ್ತೆಬದಿ ನೆಡಲಾದ ಹೊಂಗೆ, ಜಂಬುನೇರಳೆ, ಅರಳಿ, ಬಸುರಿ, ಬೇವು, ಟೊಕೊಮೊ, ಸಿಹಿ ಹುಣಸಿ, ಮಹಾಗನಿ, ಬಂಗಾಳಿ, ಬಸವನಪಾದ, ತಬುಬಿಯಾ, ಜಕರಂಡಾ ಸೇರಿ ಇತರ ಜಾತಿಯ ಗಿಡಗಳನ್ನು ನೆಡಲಾಗಿದೆ.

    ಅರಣ್ಯ ಇಲಾಖೆಯಿಂದ ಪ್ರತಿವರ್ಷ ರಸ್ತೆಬದಿ, ಬ್ಲಾಕ್ ನೆಡುತೋಪು, ಸಂಘ ಸಂಸ್ಥೆ ನೆಡುತೋಪು ಮಾಡಲಾಗಿರುತ್ತದೆ. ಮಳೆ ಕೊರತೆಯಿಂದ ನೀರಿನ ಪ್ರಮಾಣ ಕಡಿಮೆ ಇದ್ದು, ಗಿಡಗಳು ಬಾಡಲಾರಂಭಿಸಿದ್ದರಿಂದ ಟ್ಯಾಂಕರ್ ಮೂಲಕ ನೀರುಣಿಸಲಾಗುತ್ತಿದೆ.
    ಬಸವರಾಜ ಗೊಗೇರಿ
    ಸಾಮಾಜಿಕ ವಲಯ ಅರಣ್ಯ ಅಧಿಕಾರಿ, ಯಲಬುರ್ಗಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts