ಹನೂರು: ತಾಲೂಕಿನ ರಾಮಾಪುರ ಸಮೀಪದ ನಾಗಣ್ಣ ನಗರದಲ್ಲಿ ಮಂಗಳವಾರ ಹಾಡಹಗಲೇ ಚಿರತೆ ದಾಳಿಗೆ 9 ಕುರಿ ಮರಿಗಳು ಹಾಗೂ 5 ಕೋಳಿಗಳು ಬಲಿಯಾಗಿವೆ.
ಗ್ರಾಮದ ಹೊರವಲಯದಲ್ಲಿ ವೆಡಚ್ಚಿಗೌಂಡರ್ ಅವರ ಜಮೀನಿದ್ದು, 60 ಕುರಿಗಳನ್ನು ಸಾಕುತ್ತಿದ್ದಾರೆ. ಎಂದಿನಂತೆ ಕುರಿಗಳನ್ನು ಮೇಯಿಸಲು ತೆರಳಿದ್ದು, 9 ಕುರಿ ಮರಿಗಳನ್ನು ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದರು. 11 ಗಂಟೆ ವೇಳೆಯಲ್ಲಿ ಚಿರತೆ ಕೊಟ್ಟಿಗೆಗೆ ಲಗ್ಗೆ ಇಟ್ಟು ಕುರಿ ಮರಿಗಳನ್ನು ಕೊಂದು ಹಾಕಿದೆ.
ಜತೆಗೆ ಜಮೀನಿನ ಆವರಣದಲ್ಲಿದ್ದ ಕೋಳಿಗಳನ್ನು ಸಾಯಿಸಿ ಅಲ್ಲಿಂದ ಓಟ ಕಿತ್ತಿದೆ. ಮಧ್ಯಾಹ್ನ 2 ಬಳಿಕ ವೆಡಚ್ಚಿಗೌಂಡರ್ ಪುತ್ರ ನಟರಾಜು ಜಮೀನಿಗೆ ಆಗಮಿಸಿದಾಗ ಈ ಬಗ್ಗೆ ತಿಳಿದು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ಡಿಆರ್ಎಫ್ಒ ಸಾಲನ್ ಪರಿಶೀಲಿಸಿದರು.