ದೆಹ್ರಾಡೂನ್: ಭಾರತದ ಪ್ರವಾಸಕ್ಕೆ ಬಂದಿರುವ ವಿದೇಶಿಗರಿಗೆ ಲಾಕ್ಡೌನ್ ಬಿಸಿ ತಟ್ಟಿದೆ. ಲಾಕ್ಡೌನ್ನಿಂದಾಗಿ ವಿಮಾನಗಳು ರದ್ದಾಗಿರುವುದರಿಂದ, ಇಲ್ಲಿ ಇರಲೂ ಆಗದೆ, ಸ್ವದೇಶಕ್ಕೆ ಹಿಂದಿರುಗಲೂ ಆಗದೆ ಪರದಾಡುತ್ತಿದ್ದಾರೆ. ಉತ್ತರಾಖಂಡದ ಪ್ರವಾಸದಲ್ಲಿರುವ 10 ವಿದೇಶಿಗರ ಪರಿಸ್ಥಿತಿಯೂ ಇದೇ ಆಗಿದೆ.
ಹಾಗಾಗಿ ಇವರೆಲ್ಲರೂ ಲಾಕ್ಡೌನ್ ನಿಯಮ ಉಲ್ಲಂಘಿಸಿ, ರಿಷಿಕೇಶದಲ್ಲಿ ತಿರುಗಾಡಲು ಮುಂದಾಗಿದ್ದರು. ಗಂಗಾ ತಟದಲ್ಲಿ ವಿಹರಿಸುತ್ತಿದ್ದ ಇವರನ್ನು ಪೊಲೀಸರು ತಡೆದು ವಿಚಾರಣೆ ನಡೆಸಿದರು. ಬಳಿಕ ಇವರೆಲ್ಲರಿಗೂ ಐ ಡಿಡ್ ನಾಟ್ ಫಾಲೋ ಲಾಕ್ಡೌನ್, ಐ ಯಾಮ್ ಸಾರಿ ಎಂದು 500 ಬಾರಿ ಬರೆಯುವ ಶಿಕ್ಷೆ ವಿಧಿಸಿದರು.
ಲಾಕ್ಡೌನ್ ನಿಯಮ ಜಾರಿಯಲ್ಲಿದ್ದರೂ ಉತ್ತರಾಖಂಡದಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಗತ್ಯವಸ್ತುಗಳನ್ನು ಖರೀದಿಸಲು ಜನರಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಹಾಗೆಂದು ಈ ಸಂದರ್ಭದಲ್ಲಿ ವಿನಾಕಾರಣ ಓಡಾಡುವುದನ್ನು ನಿರ್ಬಂಧಿಸಲಾಗಿದೆ.
ಹೀಗಿದ್ದೂ ಅಮೆರಿಕ, ಆಸ್ಟ್ರೇಲಿಯಾ, ಮೆಕ್ಸಿಕೋ ಮತ್ತು ಇಸ್ರೇಲ್ನಿಂದ ಭಾರತದ ಪ್ರವಾಸಕ್ಕೆ ಬಂದಿರುವ 10 ಜನರ ಗುಂಪು ರಿಷಿಕೇಶದ ಗಂಗಾ ತಟದಲ್ಲಿ ವಿಹಾರಕ್ಕೆ ತೆರಳಿತ್ತು. ಇದು ತಪ್ಪು ಎಂದು ರಿಷಿಕೇಶದ ತಪೋವನ ಪೊಲೀಸ್ ಠಾಣೆಯ ಮೇಲ್ವಿಚಾರಕ ವಿನೋದ್ ಶರ್ಮ ಹೇಳಿದರು.
ಈ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಐ ಡಿಡ್ ನಾಟ್ ಫಾಲೋ ಲಾಕ್ಡೌನ್, ಐ ಯಾಮ್ ಸಾರಿ ಎಂದು 500 ಸಾರಿ ಬರೆಯುವ ಶಿಕ್ಷೆ ನೀಡಿದ್ದಾಗಿ ತಿಳಿಸಿದರು.
ಇದು ಕೋವಿಡ್ 19 ಗೆದ್ದವರ ಕತೆ, ಕರೊನಾ ಸೋಂಕಿನ ಲಕ್ಷಣ ಇಲ್ಲವಾದರೂ ಲಾಕ್ಡೌನ್ ವೇಳೆ ಮನೆಯಲ್ಲೇ ಇರಿ