More

    ಈ ಥರ ಕೊಲೆ ಪ್ರಕರಣ ಭೇದಿಸಿದ್ದು ರಾಜ್ಯದಲ್ಲಿ ಇದೇ ಮೊದಲು!; ವರ್ಷದ ಹಿಂದೆ ನಡೆದಿದ್ದ ಹತ್ಯೆ, ಬಯಲಾಯ್ತು ಭಯಾನಕ ಸತ್ಯ

    ರಾಮನಗರ: ವಿಶೇಷವಾದ ರೀತಿಯಲ್ಲಿ ಕೊಲೆ ಪ್ರಕರಣವೊಂದನ್ನು ಭೇದಿಸುವ ಮೂಲಕ ಪೊಲೀಸರು ರಾಜ್ಯದಲ್ಲೇ ಇದು ಪ್ರಥಮ ಎಂಬಂಥ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ಈ ಮುಖೇನ ಒಂದು ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಂತಾಗಿದೆ. ಇಂಥದ್ದೊಂದು ಹೆಗ್ಗಳಿಕೆ ರಾಮನಗರ ಪೊಲೀಸರು ಭಾಜನರಾಗಿದ್ದಾರೆ.

    ಕಳೆದ ವರ್ಷ ಕನಕಪುರ ಟೌನ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಶ್ರೇಯಸ್ ಎಂಬ ಬಾಲಕ ಕಾಣೆಯಾಗಿದ್ದು, ಬಳಿಕ ಆತನ ಕೊಲೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಾಯಿ ಕನಕಪುರ‌ದ ವಕೀಲ ಶಂಕರೇಗೌಡನ ಮೇಲೆ ದೂರು ನೀಡಿದ್ದರು. ಈ ಮೇರೆಗೆ ಕನಕಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಏನೇ ತನಿಖೆ ಮಾಡಿದರೂ ಸತ್ಯಾಸತ್ಯತೆ ಹೊರಬಾರದ್ದರಿಂದ ಕೊನೆಯದಾಗಿ ಪೊಲೀಸರು ಬ್ರೇನ್ ಮ್ಯಾಪಿಂಗ್ ಪರೀಕ್ಷೆಯ ಮೊರೆ ಹೋಗಿದ್ದರು.

    ಆರೋಪಿಯನ್ನು ಬ್ರೇನ್​ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲು ಪೊಲೀಸರು ಕೋರ್ಟ್ ಅನುಮತಿ ಕೇಳಿದ್ದು, ನ್ಯಾಯಾಲಯ ಅದಕ್ಕ ಒಪ್ಪಿಗೆ ನೀಡಿತ್ತು. ಆ ಮೇರೆಗೆ ರಾಜ್ಯದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿರುವ ನೂತನ ಬಿಇಒಎಸ್ ತಂತ್ರಜ್ಞಾನದ ಮೂಲಕ ಆರೋಪಿಯನ್ನು ಬ್ರೇನ್​ ಮ್ಯಾಪಿಂಗ್​ಗೆ ಒಳಪಡಿಸಲಾಗಿತ್ತು. ಬಾಲಕನನ್ನು ಲೈಂಗಿಕವಾಗಿ ಬಳಸಿಕೊಂಡು ಕೊಲೆ ಮಾಡಿ ಕೆರೆಗೆ ಹಾಕಿದ್ದು ಆರೋಪಿಯ ಬ್ರೇನ್ ಮ್ಯಾಪಿಂಗ್ ಪರೀಕ್ಷೆ ವೇಳೆ ತಿಳಿದುಬಂದಿತ್ತು. ಈ ಆಧಾರದಲ್ಲಿ ಪೊಲೀಸರು ಕೊಲೆ ರಹಸ್ಯದ ಕುರಿತು ಹೆಚ್ಚುವರಿ ಅರೋಪ ಪಟ್ಟಿ ಸಲ್ಲಿಸಿದ್ದಾರೆ.

    ರಾಮನಗರ ಪೊಲೀಸರು ಹೀಗೆ ಬ್ರೇನ್​ ಮ್ಯಾಪಿಂಗ್ ಮೂಲಕ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ರಹಸ್ಯ ಬೇಧಿಸಿದ್ದು, ಇದು ರಾಜ್ಯದಲ್ಲೇ ಮೊದಲ ಪ್ರಕರಣ ಎಂದೆನಿಸಿಕೊಂಡಿದೆ. ಆರೋಪಿಯ ಬ್ರೇನ್​ ಮ್ಯಾಪಿಂಗ್ ಮೂಲಕ ಕೊಲೆ ರಹಸ್ಯ ಬಯಲು ಮಾಡಲಾಗಿದ್ದು, ಅದರ ವರದಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಕರ್ನಾಟಕದಲ್ಲಿ ಇದೇ ಮೊದಲ ಸಲ ಆರೋಪಿಗೆ ಬ್ರೇನ್ ಮ್ಯಾಪಿಂಗ್ ಮಾಡಲಾಗಿದ್ದು, ಕಳೆದೊಂದು ವರ್ಷದಿಂದ ಪೋಲಿಸರಿಗೆ ತಲೆನೋವಾಗಿದ್ದ ಪ್ರಕರಣ ಮುಕ್ತಾಯ ಹಂತ ತಲುಪುವ ಲಕ್ಷಣಗಳು ಗೋಚರಿಸಿವೆ.

    ಬಿಟ್ಟಿ ಪ್ರಚಾರಕ್ಕಾಗಿ ಚಿಲ್ರೆ ಕೆಲಸ: ತನ್ನ ಸಂಸ್ಥೆಯ ಮಾರ್ಕೆಟಿಂಗ್​ಗಾಗಿ ಫ್ಲೈಓವರ್​ ಮೇಲಿಂದ ಹಣ ಎಸೆದೆ ಎಂದು ತಪ್ಪೊಪ್ಪಿಕೊಂಡ

    1 ನಿಮಿಷಕ್ಕೆ 69 ತೆಂಗಿನಕಾಯಿ ಒಡೆದ ಸಾಹಸಿ; 12,008 ಕಾಯಿಗಳನ್ನು ಒಡೆದು ಬಳಿಕ ಶಿವತಾಂಡವ ನೃತ್ಯ

    ಮನೆಯಲ್ಲಿ ಯಾರೂ ಇಲ್ಲದಾಗ ಕಳ್ಳತನಕ್ಕೆ ಬಂದವರು ಹೆದರಿ ಓಡಿಹೋದ್ರು: ಆಗಿದ್ದಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts