ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಸ್ವತಂತ್ರ ಭಾರತದ 75 ಪ್ರಮುಖ ಸಾಧನೆಗಳು ಹಾಗೂ ಘಟನೆಗಳನ್ನು ಈ ಸರಣಿಯಲ್ಲಿ ನೀಡಲಾಗಿದೆ.
2001ರಲ್ಲಿ ಗೋಲ್ಡನ್ ಕ್ವಾಡ್ರಿಲ್ಯಾಟರಲ್ (ಸುವರ್ಣ ಚತುಷ್ಪಥ) ಯೋಜನೆಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಚಾಲನೆ. ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತಾಗಳನ್ನು ಎಕ್ಸ್ಪ್ರೆಸ್ ಹೆದ್ದಾರಿಗಳ ಮೂಲಕ ಜೋಡಿಸುವ ಅತಿದೊಡ್ಡ ರಸ್ತೆ ನಿರ್ಮಾಣ ಯೋಜನೆ.
2007ರಲ್ಲಿ ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿಯಾಗಿ ಪ್ರತಿಭಾ ಪಾಟೀಲ ಆಯ್ಕೆ. 2007ರಿಂದ 2012ರವರೆಗೆ ಕಾರ್ಯನಿರ್ವಹಣೆ.
2007ರ ಸೆಪ್ಟೆಂಬರ್ 24ರಂದು ಭಾರತದ ತಂಡ ಪ್ರಥಮ ಟಿ 20 ವಿಶ್ವಕಪ್ ಕ್ರಿಕೆಟ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿತು.
2008 ಅಕ್ಟೋಬರ್ 22ರಂದು ಚಂದ್ರಯಾನ ಯೋಜನೆಯಲ್ಲಿ ಇಸ್ರೋದಿಂದ ಚಂದ್ರಯಾನ 1 ಬಾಹ್ಯಾಕಾಶ ನೌಕೆ ಉಡಾವಣೆ. ವೊದಲ ಪ್ರಯತ್ನದಲ್ಲೇ ಚಂದ್ರನ ಕಕ್ಷೆಗೆ ಲೂನಾರ್ ವಾಹನವನ್ನು ಇಳಿಸಿದ ಕೀರ್ತಿ ಇಸ್ರೋಗೆ ಸಂದಿತು. ಚಂದ್ರನ ಅಂಗಳದಲ್ಲಿ ನೀರಿನ ಅಂಶವಿದೆಯೇ ಎಂಬುದರ ಅಧ್ಯಯನ ಈ ಯೋಜನೆಯ ಉದ್ದೇಶವಾಗಿತ್ತು.
2011ರ ಏಪ್ರಿಲ್ 2ರಂದು ಶ್ರೀಲಂಕಾ ವಿರುದ್ಧ ಜಯಿಸಿ ಭಾರತವು ಎರಡನೇ ಬಾರಿಗೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಯಿತು.
2014ರ ಜೂನ್ 8ರಂದು ಭಾರತದ ಮೊದಲ 1000 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಕೂಡಂಕೂಳಂ ಅಣುಶಕ್ತಿ ಕೇಂದ್ರ ಕಾರ್ಯಾರಂಭ ಮಾಡಿತು.
2014ರ ಆಗಸ್ಟ್ 15ರಂದು, ಪ್ರತಿ ಮನೆಯಲ್ಲೂ ಕನಿಷ್ಠ ಒಂದು ಬ್ಯಾಂಕ್ ಖಾತೆ ಇರಬೇಕೆಂಬ ಉದ್ದೇಶದಿಂದ ‘ಪ್ರಧಾನಮಂತ್ರಿ ಜನ-ಧನ ಯೋಜನೆ’ಗೆ ಚಾಲನೆ ದೊರೆಯಿತು.
2014ರ ಸೆಪ್ಟೆಂಬರ್ನಲ್ಲಿ ಕಡಿಮೆ ವೆಚ್ಚದಲ್ಲಿ ಚೊಚ್ಚಲ ಪ್ರಯತ್ನದಲ್ಲಿ ಮಂಗಳನ ಕಕ್ಷೆಗೆ ಗಗನ ನೌಕೆಯೊಂದನ್ನು ಇಸ್ರೋ ಸೇರಿಸಿತು-ಮಾರ್ಸ್ ಆರ್ಬಿಟರ್ ಮಿಷನ್ (ಮಾಮ್. ಮೊದಲ ಪ್ರಯತ್ನದಲ್ಲೇ ಮಂಗಳನ ಅಂಗಳವನ್ನು ತಲುಪಿದ ಏಷ್ಯಾದ ಮೊದಲ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಯಿತು.
2015ರ ಜನವರಿ 1ರಂದು ನೀತಿ ಆಯೋಗ ರಚನೆ. ಆರ್ಥಿಕ ಅಭಿವೃದ್ಧಿ ಪೋಷಣೆ ಹಾಗೂ ದೇಶದ ಆರ್ಥಿಕ ನೀತಿ ರಚನೆಯಲ್ಲಿ ರಾಜ್ಯಗಳ ಪಾಲ್ಗೊಳ್ಳುವಿಕೆ ಉದ್ದೇಶ.
2016ರ ನವೆಂಬರ್ 8ರಂದು ಮಧ್ಯರಾತ್ರಿ 12 ಗಂಟೆಯಿಂದ ಜಾರಿಗೆ ಬರುವಂತೆ 1,000 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳು ಅಮಾನ್ಯಗೊಂಡವು. ಕಾಳಧನ, ಭಯೋತ್ಪಾದನೆ ತಡೆಗೆ ಕೇಂದ್ರ ಈ ಕ್ರಮ ತೆಗೆದುಕೊಂಡಿತು.
2017ರ ಜುಲೈ 1ರಂದು ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿ. ಒಂದು ದೇಶ ಒಂದು ತೆರಿಗೆ ಮೂಲಕ ತೆರಿಗೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಜಾರಿ.
2017ರ ಫೆಬ್ರವರಿಯಲ್ಲಿ ಒಂದೇ ರಾಕೆಟ್ನಲ್ಲಿ 104 ಉಪಗ್ರಹಗಳನ್ನು ಪಿಎಸ್ಎಲ್ವಿ ಸಿ37 ಮೂಲಕ ಹೊತ್ತೊಯ್ದು ಯಶಸ್ವಿಯಾಗಿ ಎಲ್ಲವನ್ನೂ ಕಕ್ಷೆಗೆ ಸೇರಿಸಿದ ಅಪರೂಪದ ದಾಖಲೆಯನ್ನು ಇಸ್ರೋ ಬರೆಯಿತು.
2019ರ ಫೆಬ್ರುವರಿಯಲ್ಲಿ ಭಾರತದ ಪ್ರಥಮ ಸ್ವದೇಶಿ ನಿರ್ವಿುತ ಹಗುರ ಯುದ್ಧವಿಮಾನ ತೇಜಸ್ ಅನ್ನು ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಿಕೊಳ್ಳಲು ಅಂತಿಮ ಒಪ್ಪಿಗೆ.
2019ರ ಜುಲೈ 22ರಂದು ಚಂದ್ರಯಾನ 2 ಉಡಾವಣೆಯಾಯಿತು. ಚಂದ್ರನ ಮೇಲೆ ಅಂತರಿಕ್ಷ ನೌಕೆಯನ್ನು ಇಳಿಸಲು ಜಿಎಲ್ಎಸ್ಎಲ್ ಎಂಕೆ 3 ರಾಕೆಟ್ ಮೂಲಕ ಈ ಉಡಾವಣೆ ನಡೆಯಿತು.
2019ರ ಆಗಸ್ಟ್ 6ರಂದು, ಸಂವಿಧಾನ 370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಲಾಯಿತು. ಅಲ್ಲದೆ, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರಾಜ್ಯವನ್ನು ವಿಭಜಿಸಲಾಯಿತು.
2020ರಲ್ಲಿ ಭಾರತ ವಿಶ್ವದ ಐದನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತು (ಕರೊನಾ ಬರುವ ಮುಂಚೆ). ಫೆಬ್ರವರಿಯಲ್ಲಿ ಬಂದ ‘ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ’ ವರದಿ ಪ್ರಕಾರ, ಬ್ರಿಟನ್ ಮತ್ತು ಫ್ರಾನ್ಸ್ ಅನ್ನು ಹಿಂದಿಕ್ಕಿ ಭಾರತದ ಜಿಡಿಪಿ 2.94 ಟ್ರಿಲಿಯನ್ ಡಾಲರ್ಗೆ ತಲುಪಿತು.
2020ರ ಮಾರ್ಚ್ 24ರಿಂದ 21 ದಿನಗಳ ಕಾಲ ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಿಸಿದ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆ. ಕೇಂದ್ರ ಸರ್ಕಾರ ವಿವಿಧ ಹಂತಗಳಲ್ಲಿ ಒಟ್ಟು 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿತು.
2022ರ ಜುಲೈ 18ರಂದು ರಾಷ್ಟ್ರಪತಿ ಚುನಾವಣೆಗೆ ಮತದಾನ. ಯಶವಂತ ಸಿನ್ಹಾ ವಿರುದ್ಧ ಜಯ ಗಳಿಸಿದ ದ್ರೌಪದಿ ಮುಮು ಜುಲೈ 25ರಂದು ಅಧಿಕಾರ ಸ್ವೀಕರಿಸಿದರು. ಈ ಉನ್ನತ ಸ್ಥಾನವೇರಿದ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆ.