More

    ವಿಮಾನದಲ್ಲೇ ಹೃದಯಾಘಾತ; ಆಕಾಶದಲ್ಲೇ ಹಾರಿಹೋದ ಪ್ರಾಣಪಕ್ಷಿ

    ಮುಂಬೈ: ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದ್ದು, ಸದ್ಯಕ್ಕಂತೂ ಅದು ಯಾಕೆ ಸಂಭವಿಸುತ್ತಿದೆ ಎಂಬುದು ಬಗೆಹರಿಯದ ಸಂಗತಿಯಂತಾಗಿದೆ. ಈ ನಡುವೆ ಹೃದಯಾಘಾತದಿಂದಾದ ಸಾವಿನ ಪ್ರಕರಣಗಳು ಮುಂದುವರಿದಿದ್ದು, ಇನ್ನೊಂದು ಅಂಥದ್ದೇ ಪ್ರಕರಣ ಸಂಭವಿಸಿದೆ.

    ಇದನ್ನೂ ಓದಿ: ಹತ್ತನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ; ಫ್ರೆಂಡ್ ಜತೆ ಮಾತನಾಡುತ್ತಲೇ ಕುಸಿದು ಬಿದ್ದು ಸಾವು

    ವಿಶೇಷವೆಂದರೆ ಈ ಪ್ರಕರಣದಲ್ಲಿ ಆಕಾಶದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ. ಅರ್ಥಾತ್, ವಿಮಾನದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರೊಬ್ಬರು ಹೃದಯಾಘಾತಕ್ಕೀಡಾಗಿ ಸಾವಿಗೀಡಾಗಿದ್ದಾರೆ. ಮುಂಬೈನಿಂದ ಬ್ಯಾಂಕಾಕ್​ಗೆ ಹೊರಟಿದ್ದ ವಿಮಾನದಲ್ಲಿ ಈ ಸಾವು ಸಂಭವಿಸಿದೆ.

    ಇದನ್ನೂ ಓದಿ: ಕಲ್ಯಾಣ ಮಂಟಪದಲ್ಲೇ ಕುಸಿದು ಬಿದ್ದ ವರ; ಆಸ್ಪತ್ರೆಯ ಮಾರ್ಗಮಧ್ಯೆ ಸಾವು

    ಭಾನುವಾರ ಇಂಡಿಗೊ 6ಇ-57 ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಎದೆನೋವಿನಿಂದ ಅಸ್ವಸ್ಥರಾಗಿದ್ದರು. ವಿಮಾನ ಹೊರಟ ಒಂದು ಗಂಟೆಯೊಳಗೆ ಈ ಘಟನೆ ನಡೆದಿದ್ದು, ವೈದ್ಯಕೀಯ ಚಿಕಿತ್ಸೆಯ ಅನಿವಾರ್ಯತೆಯಿಂದ ವಿಮಾನವನ್ನು ಕೂಡಲೇ ಮ್ಯಾನ್ಮಾರ್​ನತ್ತ ಡೈವರ್ಟ್​ ಮಾಡಲಾಯಿತಾದರೂ, ಹೃದಯಾಘಾತಕ್ಕೀಡಾಗಿದ್ದ ಪ್ರಯಾಣಿಕ ಅಷ್ಟರಲ್ಲಾಗಲೇ ಸಾವಿಗೀಡಾಗಿದ್ದರು. ಸಾವಿಗೀಡಾದ ವ್ಯಕ್ತಿಯ ವಿವರ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

    ನಿದ್ರಾಹೀನತೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ; ನಿದ್ರಾಹೀನತೆಗೆ ಪ್ರಮುಖ ಕಾರಣವೇ ಇದು!

    ಈ ಯಂತ್ರವೊಂದಿದ್ದರೆ ಸಾಕು, ಕಳ್ಳರಿಗೆ ‘ಹೊಗೆ’ನೇ; ಕಳವಿಗೆ ಬಂದವರು ಧೂಮಕ್ಕೆ ಹೆದರಿ ಪರಾರಿ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts