More

    ತಮಿಳಿನ ಖ್ಯಾತ ನಟನೊಂದಿಗೆ ಕೆಜಿಎಫ್​ ಬೆಡಗಿ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥ!; ಆಮಂತ್ರಣ ಪತ್ರಿಕೆ ಇಲ್ಲಿದೆ..

    ಕೆಜಿಎಫ್​ ಸಿನಿಮಾ ಮೂಲಕ ಯಶ್​ ಪ್ಯಾನ್​ ಇಂಡಿಯಾ ಸ್ಟಾರ್ ಆಗಿ ಬೆಳೆದರು. ಅದೇ ರೀತಿ ಚಿತ್ರದ ನಿರ್ದೇಶಕ, ಸಂಗೀತ ನಿರ್ದೇಶಕ, ಛಾಯಾಗ್ರಾಹಕರಿಗೂ ಮನ್ನಣೆ ಸಿಕ್ಕಿತು. ಅದೇ ರೀತಿ ಚೊಚ್ಚಲ ಸಿನಿಮಾ ಮೂಲಕವೇ ಎಲ್ಲರ ಗಮನಸೆಳೆದ ನಟಿ ಶ್ರೀನಿಧಿ ಶೆಟ್ಟಿ ಸಹ ಪರಭಾಷೆಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಇದೀಗ ಪರಭಾಷೆ ನಟನೊಂದಿಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ!!

    ಇದನ್ನೂ ಓದಿ: ಹಲವು ದೇವರುಗಳಿಗೆ ಹರಕೆ ಹೊತ್ತ ನಂತರ ಹುಟ್ಟಿದವನು ಸುಶಾಂತ್​ ಸಿಂಗ್​ ರಜಪೂತ್​

    ಅಚ್ಚರಿ ಅನಿಸಿದರೂ ಇದು ನಿಜ. ಆದರೆ, ರಿಯಲ್​ ಅಲ್ಲ ರೀಲ್​ನಲ್ಲಿ! ಅಂದರೆ, ಕಾಲಿವುಡ್​ ಸ್ಟಾರ್ ನಟ ಚಿಯಾನ್ ವಿಕ್ರಂ ನಾಯಕತ್ವದಲ್ಲಿ ಕೋಬ್ರಾ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ವಿಕ್ರಂಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದು, ಇದೀಗ ಆ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿದ್ದು, ದಿನಾಂಕ ಸಹ ನಿಗದಿ ಮಾಡಿದೆ. ಅಂದಹಾಗೆ, ಆ ಹಾಡು ನಾಯಕ ಮತ್ತು ನಾಯಕಿಯ ನಿಶ್ಚಿತಾರ್ಥಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಹಾಡಿನ ಬಿಡುಗಡೆಗೆಂದೇ ವಿಶೇಷ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದೆ.

    ತಮಿಳಿನ ಖ್ಯಾತ ನಟನೊಂದಿಗೆ ಕೆಜಿಎಫ್​ ಬೆಡಗಿ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥ!; ಆಮಂತ್ರಣ ಪತ್ರಿಕೆ ಇಲ್ಲಿದೆ..

    ಇದನ್ನೂ ಓದಿ: ಚಿತ್ರಮಂದಿರಗಳ ಕಥೆ ಏನು? ಅನುಷ್ಕಾ ಹೇಳ್ತಾರೆ ಕೇಳಿ …

    ಅಜಯ್​ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೋಬ್ರಾ ಚಿತ್ರದ ‘ತುಂಬಿ ತುಳ್ಳಾಲ್​..’ ಸಾಹಿತ್ಯ ಸಾಲುಗಳುಳ್ಳ ಗೀತೆಗೆ ಎ. ಆರ್ ರೆಹಮಾನ್​ ಸಂಗೀತ​ ನೀಡಿದ್ದು, ಜೂ. 29ರ ಸೋಮವಾರ ಸಂಜೆ 5 ಗಂಟೆಗೆ ಸೋನಿ ಮ್ಯೂಸಿಕ್​ನಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಚಿತ್ರದ ಶೇ. 70 ಶೂಟಿಂಗ್​ ಮುಗಿದಿದ್ದು, ಲಾಕ್​ಡೌನ್​ ಮತ್ತಷ್ಟು ಸಡಿಲಾಗುತ್ತಿದ್ದಂತೆ ಬಾಕಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. (ಏಜೆನ್ಸೀಸ್​)

    ನೆಪೋಟಿಸಂ: ಹಾಗಂತ ಎಲ್ಲರೂ ಉದ್ಧಾರ ಆದ್ರು ಅಂತ ಹೇಳೋದು ಕಷ್ಟ …

    ಸೀರಿಯಲ್​ ನಟನಿಗೆ ಕರೊನಾ ಪಾಸಿಟಿವ್​; ಧಾರಾವಾಹಿಗಳ ಶೂಟಿಂಗ್​ ರದ್ದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts