ನವದೆಹಲಿ: ರಾಜಸ್ಥಾನದ ರಾಜಕೀಯ ನಾಟಕ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸೋಮವಾರ ಬೆಳಗ್ಗೆ ಕರೆಯಲಾಗಿದ್ದ ಕಾಂಗ್ರಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ 107 ಶಾಸಕರು ಪಾಲ್ಗೊಂಡಿದ್ದರು ಎಂದು ಸಿಎಂ ಅಶೋಕ್ ಗೆಹ್ಲೋಟ್ ಅವರ ಮಾಧ್ಯಮ ಕಾರ್ಯದರ್ಶಿ ಹೇಳಿದ್ದಾರೆ.
ಆದರೆ, ಮೂಲಗಳ ಪ್ರಕಾರ 107 ಕಾಂಗ್ರೆಸ್ ಶಾಸಕರ ಪೈಕಿ 97 ಶಾಸಕರು ಮಾತ್ರ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಉಳಿದವರು ಪಕ್ಷೇತರ ಶಾಸಕರು ಮತ್ತಿತರ ಪಕ್ಷಗಳ ಶಾಸಕರು ಎನ್ನಲಾಗಿದೆ. ಒಟ್ಟಾರೆ ಹೇಳುವುದಾದರೆ ರಾಜಸ್ಥಾನದ ರಾಜಕೀಯ ನಾಟಕದ ಪ್ರಸಕ್ತ ಸುತ್ತಿನಲ್ಲಿ ಗೆಹ್ಲೋಟ್ಗೆ ಗೆಲುವಾಗಿದ್ದು, ಸಚಿನ್ ಪೈಲಟ್ಗೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ವಾಪಸ್ ಬರುವೆ ಎಂದಿದ್ದ ಬಿಜೆಪಿ ಶಾಸಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!
ಎಚ್ಚರಿಕೆ ಸಡಿಲಿಸದ ಕಾಂಗ್ರೆಸ್: ತನ್ನ ಬಳಿ ಬಹುಮತಕ್ಕೆ ಅಗತ್ಯವಾದಷ್ಟು ಶಾಸಕರ ಸಂಖ್ಯೆ ಇದೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಆದರೂ, ಎಚ್ಚರಿಕೆಯನ್ನು ಸಡಿಲಿಸದಿರಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅದು, ಇನ್ನೂ ಸಮಯ ಮೀರಿಲ್ಲ. ಮಾತುಕತೆ ಮೂಲಕ ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬಗೆಹರಿಸಿಕೊಳ್ಳೋಣ. ಬನ್ನಿ ಎಂದು ಸಚಿನ್ ಪೈಲಟ್ ಅವರನ್ನು ಆಹ್ವಾನಿಸುತ್ತಲೇ ಇದ್ದಾರೆ.
ಆದರೆ, ಇದಾವುದಕ್ಕೂ ಕಿವಿ ಮೇಲೆ ಹಾಕಿಕೊಳ್ಳದ ಸಚಿನ್ ಪೈಲಟ್, ಸೋಮವಾರದ ಶಾಸಕಾಂಗ ಪಕ್ಷದ ಸಭೆಯಲ್ಲಿ 107 ಶಾಸಕರು ಪಾಲ್ಗೊಂಡಿದ್ದರು ಎಂಬುದೇ ಸುಳ್ಳು ಎಂದು ಹೇಳಿದ್ದಾರೆ. ಒಂದು ಮೂಲದ ಪ್ರಕಾರ 107 ಕಾಂಗ್ರೆಸ್ ಶಾಸಕರ ಪೈಕಿ 97 ಶಾಸಕರು ಮಾತ್ರ ಸಭೆಯಲ್ಲಿದ್ದರು. ಇಬ್ಬರು ಸಚಿವರು ಕೂಡ ಗೈರಾಗಿದ್ದರು ಎನ್ನಲಾಗಿದೆ.
PHOTOS: ಕಾಸ್ಮೆಟಿಕ್ ಸರ್ಜರಿ ಎಫೆಕ್ಟ್: ಕಾರ್ಟೂನ್ ಕ್ರಿಯೇಚರ್ ಆಗಿಬಿಟ್ಟಳು ಸುಂದರಿ!