ಉತ್ತರಕನ್ನಡ: ಸಂಭ್ರಮ-ಸಡಗರ ತುಂಬಿದ್ದ ಮದುವೆ ಮನೆಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿದ್ದು, ಕುಟುಂಬಸ್ಥರು-ಬಂಧುಬಳಗ ಸೇರಿದಂತೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಅಂಕೋಲಾ ತಾಲೂಕಿನ ಅವರ್ಸಾದ ಶ್ರೀ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ರಾಮನಗುಳಿಯ ದಿವ್ಯಾ ಮತ್ತು ಕೇಣಿ ಗ್ರಾಮದ ಪ್ರಕಾಶ ಅವರ ಮದುವೆ ಕಾರ್ಯಕ್ರಮ ಶನಿವಾರ ನಿಗದಿಯಾಗಿತ್ತು. ಹಾಗಾಗಿ ಅವರ್ಸಾದಲ್ಲಿರುವ ದಿವ್ಯಾರ ಅಕ್ಕನ ಮನೆಯಲ್ಲಿ ಮದುಮಗಳು ಹಾಗೂ ಸಂಬಂಧಿಕರು ಉಳಿದುಕೊಂಡಿದ್ದರು. ಮಧ್ಯಾಹ್ನ 12.40ಕ್ಕೆ ಮುಹೂರ್ತ ಇತ್ತು, ಬೆಳಗಿನ ಜಾವ ಎದ್ದು ಮದುವೆಗೆ ಸಿದ್ಧತೆ ನಡೆಸಿದ್ದರು. ಇದನ್ನೂ ಓದಿರಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲು
ಮದುಮಗಳಿದ್ದ ಕೋಣೆಯನ್ನು ಗುರಿಯಾಗಿಸಿ ಅಪರಿಚಿತ ವ್ಯಕ್ತಿಯೊಬ್ಬ ಬೆಳ್ಳಂಬೆಳಗ್ಗೆ ಕಿಟಕಿಯಿಂದ ಮೂರು ಬಾರಿ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಗುಂಡಿನ ಶಬ್ದ ಕೇಳಿ ಜನ ಕಂಗಾಲಾಗಿ ಕೂಗಿಕೊಳ್ಳುತ್ತಿದ್ದಂತೆ ಬಂದೂಕಿಧಾರಿ ನಾಪತ್ತೆಯಾಗಿದ್ದಾನೆ.
ಅಂಕೋಲಾ ಠಾಣೆಯ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಗೋಡೆಗಳ ಮೇಲೆ ಗುಂಡಿನ ಕಲೆ ಲಭಿಸಿದೆ. ಮೂರು ಗುಂಡುಗಳು ಪತ್ತೆಯಾಗಿವೆ. ಗುಂಡಿನ ಸದ್ದಿಗೆ ಕಂಗಾಲಾಗಿದ್ದ ವಧುವಿನ ಕುಟುಂಬಕ್ಕೆ ಪೊಲೀಸು ಧೈರ್ಯ ತುಂಬಿದರು. ಪೊಲೀಸ್ ಗಸ್ತಿನಲ್ಲಿ ಮದುವೆ ನೆರವೇರಿತು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗುಂಡಿನ ದಾಳಿ ನಡೆಸಿದವರನ್ನ ಪತ್ತೆ ಹಚ್ಚಲು ಕುಟುಂಬಸ್ಥರು ಆಗ್ರಹಿಸಿದ್ದಾರೆ.
3 ಸಾವಿರ ಹಣ ಕೊಟ್ಟು ನನ್ನ ಕಾರಿಗೆ ಡೀಸೆಲ್ ಹಾಕಿಸದಷ್ಟು ದುರ್ಗತಿ ಬಂದಿಲ್ಲ… ಎನ್ನುತ್ತಲೇ ಸಿಡಿಮಿಡಿಗೊಂಡ ಸವದಿ
ಸೆಕ್ಸ್ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್ ಮನೆಯಲ್ಲಿ ವಿವಾಹಿತೆ ಸಾವು!
ತಾಯಿ-ತಂಗಿ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದುಬಿಟ್ಟ! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ