ಬೆಂಗಳೂರು: ಆನ್ಲೈನ್ ಫುಡ್ ಆರ್ಡರ್ ಮಾಡಿ, ನಂತರ ಡೆಲಿವರಿ ಬಾಯ್ ಹಲ್ಲೆ ಮಾಡಿದ ಎಂದು ಆರೋಪಿಸಿದ್ದ ಇನ್ಸ್ಟಾಗ್ರಾಂ ಇನ್ಫ್ಲೂಯೆನ್ಸರ್ ಹಿತೇಶಾ ಚಂದ್ರಾಣಿ ಮೇಲೆ ಎಫ್ಐಆರ್ ದಾಖಲಾಗಿದೆ. ಚಪ್ಪಲಿ ಎಸೆದು ಹಲ್ಲೆ ಮಾಡಿದ್ದ ಹಿನ್ನೆಲೆಯಲ್ಲಿ ಎಫ್ಐಆರ್ ಹಾಕಲಾಗಿದೆ.
ಹಿತೇಶಾ ಚಂದ್ರಾಣಿ ಹೆಸರಿನ ಯುವತಿ ಇತ್ತೀಚೆಗೆ ಜೊಮ್ಯಾಟೋದಲ್ಲಿ ಊಟ ಆರ್ಡರ್ ಮಾಡಿದ್ದಳು. 3.30ಕ್ಕೆ ಬರಬೇಕಿದ್ದ ಊಟವನ್ನು ಡೆಲಿವರಿ ಬಾಯ್ ಕಾಮರಾಜ್ ಒಂದು ಗಂಟೆ ಲೇಟಾಗಿ ತಂದುಕೊಟ್ಟಿದ್ದ. ಆ ಹಿನ್ನೆಲೆಯಲ್ಲಿ ಅವರಿಬ್ಬರ ನಡುವೆ ಜಗಳವಾಗಿದೆ. ಕಾಮರಾಜ್ ನನ್ನ ಮುಖಕ್ಕೆ ಪಂಚ್ ಮಾಡಿದ ಎಂದು ಯುವತಿ ಕಣ್ಣೀರಿಡುತ್ತ ವಿಡಿಯೋ ಮಾಡಿ ಹರಿಬಿಟ್ಟಿದ್ದಳು. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಕಾಮರಾಜ್ ವಿರುದ್ಧ ದೂರು ನೀಡಿದ್ದಳು. ಆದರೆ ಕಾಮರಾಜ್ ಈ ಆರೋಪವನ್ನು ಸುಳ್ಳು ಎಂದು ಹೇಳಿದ್ದು, ಆಕೆಯೇ ತನ್ನ ಮೇಲೆ ಹಲ್ಲೆ ಮಾಡಿದ್ದಾಗಿ ಹೇಳಿದ್ದ. ಚಪ್ಪಲಿ ಎಸೆದು ಹಲ್ಲೆ ಮಾಡಿದ್ದಳು ಎಂದು ತಿಳಿಸಿದ್ದ.
ಅದೇ ವಿಚಾರವಾಗಿ ಈಗ ಕಾಮರಾಜ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಚಪ್ಪಲಿಯಿಂದ ಹಲ್ಲೆ ಮಾಡಿರುವ ಬಗ್ಗೆ ಮತ್ತು ಸುಳ್ಳು ಆರೋಪ ಮಾಡಿರುವ ಬಗ್ಗೆ ದೂರು ನೀಡಿದ್ದಾನೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸದ್ಯ ಪ್ರಕರಣ ತನಿಖಾ ಹಂತದಲ್ಲಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಊಟ ಡೆಲಿವರಿ ಲೇಟಾಗಿದ್ದಕ್ಕೆ ಮುಖಕ್ಕೆ ಪಂಚ್ ಹೊಡೆಸಿಕೊಂಡ ಯುವತಿ! ಇನ್ಫ್ಲೂಯೆನ್ಸರ್ ಕಥೆ ಕೇಳೋರ್ಯಾರು?