More

    ತೊಟ್ಟಿಲಲ್ಲಿ ಮಲಗಿದ್ದ ಮಗು ಮರುದಿನ ಬಾವಿಯಲ್ಲಿ ಶವವಾಗಿ ಪತ್ತೆ: ಪ್ರಕರಣ ಭೇದಿಸಿದ ಪೊಲೀಸರು

    ಉತ್ತರಕನ್ನಡ: 40 ದಿನದ ಹಸಿಗೂಸನ್ನು ಬಾವಿಗೆಸೆದು ಕೊಲೆ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಉತ್ತರ ಕನ್ನಡ ಪೊಲೀಸರು ಯಶಸ್ವಿಯಾಗಿದ್ದಾರೆ.

    ಆಘಾತಕಾರಿಯೆಂದರೆ ಹೆತ್ತ ತಂದೆ-ತಾಯಿಯೇ ಮಗುವನ್ನು ಬಾವಿಗೆ ಎಸೆದು ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಚಂದ್ರಶೇಖರ್ ಭಟ್ ಹಾಗೂ ಪ್ರಿಯಾಂಕಾ ಎಂದು ಗುರುತಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

    ಇದನ್ನೂ ಓದಿ: ಹೊಟ್ಟೆ ನೋವೆಂದು ಹೆರಿಗೆ ಆಸ್ಪತ್ರೆಗೆ ಬಂದ ಮಹಿಳೆಗೆ ಆಪರೇಷನ್​ ಮಾಡಿದ ವೈದ್ಯರಿಗೆ ಕಾದಿತ್ತು ಅಚ್ಚರಿ!

    ಅಗಸ್ಟ್ 2ರಂದು ಯಲ್ಲಾಪುರ ತಾಲೂಕಿನ ರಾಮನಕೊಪ್ಪದಲ್ಲಿ ಘಟನೆ ನಡೆದಿತ್ತು. ಅಂದು 40 ದಿನದ ಹೆಣ್ಣು ಶಿಶುವನ್ನು ಬಾವಿಗೆ ಎಸೆಯಲಾಗಿತ್ತು. ತೊಟ್ಟಿಲಲ್ಲಿ ಮಲಗಿದ್ದ ಮಗು ಮರು ದಿನ ಬಾಯಿಯಲ್ಲಿ ಶವವಾಗಿ ಪತ್ತೆಯಾಗಿತ್ತು.

    ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತೀವ್ರ ವಿಚಾರಣೆ ನಡೆಸಿದ ಪೋಲಿಸರಿಗೆ ಹೆಣ್ಣು ಮಗು ಎಂಬ ಕಾರಣಕ್ಕೆ ಪಾಲಕರೇ ಕೊಲೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಕೊಲೆ ಮಾಡಿದ ಬಳಿಕ ಮಗು ನಾಪತ್ತೆ ಎಂದು ನಾಟಕವಾಡಿರುವುದು ಬೆಳಕಿಗೆ ಬಂದಿದೆ. (ದಿಗ್ವಿಜಯ ನ್ಯೂಸ್​)

    ಹೆಂಡ್ತಿಯನ್ನು ಭೀಕರವಾಗಿ ಹತ್ಯೆಗೈದ, ಯಾರೋ ಅತ್ಯಾಚಾರವೆಸಗಿ ಕೊಂದಂತೆ ಮೃತದೇಹದ ಬಟ್ಟೆ ಹರಿದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts