ಸೂರತ್: ಮನೆಯ ನವೀಕರಣಕ್ಕಾಗಿ ಎನ್ಆರ್ಐ ಪುತ್ರ ಪಡೆದಿದ್ದ 1.80 ಲಕ್ಷ ರೂ. ಸಾಲ ಮರಳಿಸುವ ವಿಷಯವಾಗಿ ಉಂಟಾದ ಜಗಳದಲ್ಲಿ ತಂದೆಯೇ ಪುತ್ರನನ್ನು ಇರಿದು ಕೊಂದಿದ್ದಾರೆ.
ಇಮ್ರಾನ್ (36) ಕೊಲೆಯಾದವರು. ಅಬ್ದುಲ್ ಹಮೀದ್ ಮಣಿಯಾರ್ ಅವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಲಂಡನ್ನಲ್ಲಿ ನೆಲೆಸಿದ್ದ ಇಮ್ರಾನ್ ಇತ್ತೀಚೆಗೆ ಪತ್ನಿಯೊಂದಿಗೆ ಭಾರತಕ್ಕೆ ಬಂದಿದ್ದರು. ತಮ್ಮ ತಂದೆಯಿಂದ 1.80 ಲಕ್ಷ ರೂ. ಪಡೆದು ತಮ್ಮ ಒಡೆತನದ ಮನೆಯನ್ನು ನವೀಕರಿಸಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ತುಂಬಾ ಕಾಲ ಇಲ್ಲಿಯೇ ಇರಬೇಕಾಗಿ ಬಂದಿತ್ತು.
ತನ್ನ ಪ್ರಜೆಗಳಿಗಾಗಿ ಬ್ರಿಟನ್ ಸರ್ಕಾರ ಭಾರತದಿಂದ ಶನಿವಾರ ವಿಶೇಷ ವಿಮಾನದ ಏರ್ಪಾಟು ಮಾಡಿದೆ. ಈ ವಿಮಾನದಲ್ಲಿ ಲಂಡನ್ಗೆ ಮರಳಲು ಇಮ್ರಾನ್ ಸಿದ್ಧತೆ ನಡೆಸಿದ್ದರು.
ವಿಷಯ ಗೊತ್ತಾಗುತ್ತಲೇ ಪುತ್ರನ ಮನೆಗೆ ಹೋದ ಅಬ್ದುಲ್ ಹಮೀದ್ ಮಣಿಯಾರ್ ಹಣದ ವಿಷಯವಾಗಿ ಸೊಸೆ ಶಾಮ್ಸುನ್ನೀಸಾ ಜತೆ ವಾಗ್ವಾದಕ್ಕಿಳಿದಿದ್ದರು. ಅಷ್ಟರಲ್ಲೇ ಮನೆಗೆ ಮರಳಿದ ಇಮ್ರಾನ್, ಮನೆ ನವೀಕರಣಕ್ಕೆ ಸ್ನೇಹಿತರಿಂದಲೂ ಹಣ ಪಡೆದಿದ್ದೇನೆ. ಆ ಸಾಲವನ್ನು ತೀರಿಸಿದ ಬಳಿಕ ನಿಮ್ಮ ಸಾಲ ತೀರಿಸುತ್ತೇನೆ. ಇಲ್ಲ ತುರ್ತು ಇದೆ ಎಂದಾದರೆ, ನನ್ನ ಮನೆಯ ಒಂದು ಭಾಗವನ್ನು ಬಾಡಿಗೆಗೆ ಕೊಟ್ಟು ಬರುವ ಬಾಡಿಗೆಯನ್ನು ಸಾಲಕ್ಕೆ ಸರಿಮಾಡಿಕೊಳ್ಳಿ ಎಂದು ತಂದೆಗೆ ಹೇಳಿದ್ದರು ಎನ್ನಲಾಗಿದೆ.
ಆದರೆ, ಈ ವಿಷಯವನ್ನು ಒಪ್ಪದ ಅಬ್ದುಲ್ ಹಮೀದ್ ಮಣಿಯಾರ್, ತಮಗೆ ಈಗಲೇ ಹಣಬೇಕು ಎಂದು ಹಟ ಹಿಡಿದರು ಎನ್ನಲಾಗಿದೆ. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದ್ದು, ಕೋಪದಲ್ಲಿ ಅಬ್ದುಲ್ ಪುತ್ರನ ಹೆಗಲು ಮತ್ತು ಕೊಂಕಳಿಗೆ ಚೂರಿಯಿಂದ ಇರಿದರು ಎನ್ನಲಾಗಿದೆ. ತೀವ್ರ ರಕ್ತಸ್ರಾವವಾಗಿ ಇಮ್ರಾನ್ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಲಾಲ್ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಸ್ಕ್ ಧರಿಸುವುದು ಹೇಗೆ ಎಂದು ತೋರಿಸಲು ಹೋಗಿ ಮುಜುಗರಕ್ಕೆ ಒಳಗಾದ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ