ಹೈದರಾಬಾದ್: ನಟಿ ಸಮಂತಾ 2017ರಲ್ಲಿ ಗೋವಾದಲ್ಲಿ ನಟ ಅಕ್ಕಿನೇನಿ ನಾಗಚೈತನ್ಯ ಅವರನ್ನು ವಿವಾಹವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರೀಯರಾಗಿರುವ ಸಮಂತಾ, ಅಭಿಮಾನಿಗಳು ಮಾಡುವ ಕ್ವಾಟ್ಲೆ ಕಾಮೆಂಟ್ಗಳಿಗೆ ತಮಾಷೆಯಾಗಿ ಪ್ರತಿಕ್ರಿಯಿಸುವುದರಲ್ಲಿ ಹೆಸರುವಾಸಿ. ಅದೇ ರೀತಿ ಇತ್ತೀಚೆಗೆ ಅಭಿಮಾನಿಯೊಬ್ಬ ಇನ್ಸ್ಟಾಗ್ರಾಂನಲ್ಲಿ ಮಾಡಿದ ಕಾಮೆಂಟ್ಗೆ ಸಮಂತಾ ನೀಡಿದ ಉತ್ತರ ಭಾರಿ ಸುದ್ದಿಯಾಗಿದೆ.
ಅಭಿಮಾನಿ ಮಾಡಿದ ಕಾಮೆಂಟ್ ಹೀಗಿದೆ… ಸಮಂತಾ ಅವರೇ ನೀವು ನಾಗಚೈತನ್ಯರಿಗೆ ವಿಚ್ಛೇದನ ನೀಡಿ, ನಾವಿಬ್ಬರು ಮದುವೆಯಾಗೋಣ ಎಂದಿದ್ದಾರೆ. ಇದಕ್ಕೆ ತೆಲುಗಿನಲ್ಲೇ ತಮಾಷೆಯಾಗಿ ಪ್ರತಿಕ್ರಿಯೆ ನೀಡಿರುವ ಸಮಂತಾ, ಚೈತನ್ಯ ನೀ ಅಡುಗು (ಚೈತನ್ಯರನ್ನು ಕೇಳು) ಎಂದಿದ್ದಾರೆ.
ಇದನ್ನೂ ಓದಿ: ಪಟಾಕಿ ಮಾರಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ; ಮುಸ್ಲಿಂ ಪಟಾಕಿ ಅಂಗಡಿಗೆ ಹಿಂದೂ ಯುವಕರ ವಾರ್ನಿಂಗ್!
ಸಮಂತಾರ ಹಾಸ್ಯಪ್ರಜ್ಞೆ ನೋಡಿದ ಅಭಿಮಾನಿಗಳು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಾಕಷ್ಟು ಕಾಮೆಂಟ್ಗಳನ್ನು ಸಮಂತಾರ ಇನ್ಸ್ಟಾಗ್ರಾಂಗೆ ಹರಿಬಿಡುತ್ತಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ “ಕಾಥು ವಾಕುಲ ರೆಂಡು ಕಾಧಲ್” ಹಾಗೂ ಇನ್ನು ಹೆಸರಿಡ ತಮಿಳು ಚಿತ್ರದಲ್ಲಿ ನಟಿಸಲಿದ್ದಾರೆ. ಅಲ್ಲದೆ, ಹೆಚ್ಚು ತಮಿಳು ಸಿನಿಮಾಗಳಲ್ಲಿ ನಟಿಸಲು ಸಮಂತಾ ಒಲವು ತೋರಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್)