ನವದೆಹಲಿ: ಮಹಿಳಾ ಕಾರ್ಯಕರ್ತೆ ತೃಪ್ತಿ ದೇಸಾಯಿ ಶಬರಿಮಲೆ ದೇವಸ್ಥಾನ ಪ್ರವೇಶ ಯತ್ನವು 2018 ಮತ್ತು 2019ರಲ್ಲಿ ರಾಷ್ಟ್ರದ ಗಮನ ಸೆಳೆದಿತ್ತು. 2018ರವರೆಗೆ ಇದ್ದ ಮುಟ್ಟಿನ ವಯಸ್ಸಿನ ಮಹಿಳೆಯರು ಶಬರಿಮಲೆಗೆ ಭೇಟಿ ನೀಡುವಂತಿಲ್ಲ ಎಂಬ ನಿಯಮವು ಸುಪ್ರೀಂಕೋರ್ಟ್ ತೀರ್ಪಿನಿಂದ ಬದಲಾದ ಬಳಿಕ ಅನೇಕ ಮಹಿಳಾ ಕಾರ್ಯಕರ್ತರು ದೇವಸ್ಥಾನ ಪ್ರವೇಶಿಸಲು ಪ್ರಯತ್ನಿಸಿದಾದರೂ ಭಕ್ತರ ಆಕ್ರೋಶದಿಂದಾಗಿ ಸಾಧ್ಯವಾಗಿಲ್ಲ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸ್ಟ್ರೀನ್ಶಾಟ್ ಒಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ತೃಪ್ತಿ ದೇಸಾಯಿ ದೇವಸ್ಥಾನ ಪ್ರವೇಶ ಯತ್ನದ ಹಿಂದೆ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಕೈವಾಡವಿದೆ ಎಂಬ ಬಿಜೆಪಿ ಉಪಾಧ್ಯಕ್ಷೆ ಶೋಭಾ ಎಸ್ ಅವರು ಮನೋರಮ ವೆಬ್ಸೈಟ್ಗೆ ನೀಡಿದ್ದಾರೆಂಬ ಹೇಳಿಕೆಯ ಸ್ಕ್ರೀನ್ಶಾಟ್ ಹರಿದಾಡುತ್ತಿದೆ. ಕೆ. ಸುರೇಂದ್ರನ್ ಸೂಚನೆಯಂತೆಯೇ ತೃಪ್ತಿ ದೇಸಾಯಿ ಶಬರಿಮಲೆ ಪ್ರವೇಶಿಸಲು ಯತ್ನಿಸಿದರು ಎಂದು ಸುದ್ದಿಗೆ ಹೆಡ್ಲೈನ್ ಸಹ ನೀಡಲಾಗಿದೆ.
ಇದನ್ನೂ ಓದಿ: ಪಕ್ಕಾ ಕಳ್ಳಿಯಾದ ‘ಮಿಸ್ ದೆಹಲಿ’- ಬಾಯ್ಫ್ರೆಂಡ್ ಜತೆ ಮಜಾ ಮಾಡಹೋಗಿ ಸಿಕ್ಕಿಬಿದ್ಳು ಸುಂದರಿ!
ಆದರೆ, ಜಾಲತಾಣದಲ್ಲಿ ಹರಿದಾಡುತ್ತಿರುವ ಸ್ಕ್ರೀನ್ಶಾಟ್ ನಕಲಿ ಮತ್ತು ತಿರುಚಲಾಗಿದೆ ಎಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ನಡೆಸಿದ ಫ್ಯಾಕ್ಟ್ಚೆಕ್ನಿಂದ ಬಯಲಾಗಿದೆ. ಅಲ್ಲದೆ, ಈ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ವತಃ ಶೋಭಾ ಎಸ್ ಸಹ ಸ್ಪಷ್ಟನೆ ನೀಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಕೇರಳ ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಸ್ಕ್ರೀನ್ಶಾಟ್ ವೈರಲ್ ಆಗಿದ್ದು, ಜಾಲತಾಣದಲ್ಲಿ ಸಾಕಷ್ಟು ಟೀಕಾ ಟಿಪ್ಪಣಿಗೂ ಕಾರಣವಾಗಿದೆ.
ಇದನ್ನೂ ಓದಿ: ಮೆದುಳಿನ ಶಸ್ತ್ರ ಚಿಕಿತ್ಸೆ ಸಮಯದಲ್ಲೂ ಬಿಗ್ ಬಾಸ್ ನೋಡಿದ ರೋಗಿ; ಕಾರಣವೇನು ಗೊತ್ತಾ?
ಕೆ. ಸುರೇಂದ್ರನ್ ಅವರು ನನ್ನನ್ನು ಮೂಲೆಗುಂಪು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶೋಭಾ ಅವರು ರಾಜ್ಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಷ್ಟ್ರೀಯ ನಾಯಕರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಸ್ಕ್ರೀನ್ಶಾಟ್ ಹರಿದಾಡುತ್ತಿದೆ. ಆದರೆ, ಶೋಭಾ ಅವರು ಹೇಳಿಕೆಯನ್ನು ಸಾಬೀತು ಮಾಡುವ ಯಾವುದೇ ಸುದ್ದಿ ಮನೋರಮಾ ಆನ್ಲೈನ್ನಲ್ಲಿ ಪ್ರಕಟವಾಗಿಲ್ಲ. ಅಲ್ಲದೆ, ತೃಪ್ತಿ ದೇಸಾಯಿ ಹಿಂದೆ ಬಿಜೆಪಿಯ ನಾಯಕರು ಇದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಯಾವ ಸುದ್ದಿಯು ಲಭ್ಯವಾಗಿಲ್ಲ ಎಂದು ಫ್ಯಾಕ್ಟ್ಚೆಕ್ ತಿಳಿಸಿದೆ.
ವೈರಲ್ ಸ್ಕ್ರೀನ್ಶಾಟ್ ಅನ್ನು ಮನೋರಮಾ ಆನ್ಲೈನ್ನಲ್ಲಿ ಪ್ರಕಟವಾದ ಇನ್ನಿತರ ಲೇಖನಗಳಿಗೆ ಹೋಲಿಕೆ ಮಾಡಿ ನೋಡಿದಾಗ ವೈರಲ್ ಸ್ಕ್ರೀನ್ಶಾಟ್ನಲ್ಲಿನ ಡೇಟ್ಲೈನ್ನ ಸ್ವರೂಪದಲ್ಲಿನ ವ್ಯತ್ಯಾಸ ಕಾಣಿಸಿದ್ದು, ಅಧಿಕೃತ ಮತ್ತು ನಕಲಿ ಚಿತ್ರಗಳಲ್ಲಿ ಡೇಟ್ಲೈನ್ ವ್ಯಾತ್ಯಾಸವನ್ನು ಈ ಕೆಳಗಿನ ಚಿತ್ರದಲ್ಲಿ ಗಮನಿಸಬಹುದಾಗಿದೆ. ಅಲ್ಲದೆ, ಮನೋರಮಾ ಆನ್ಲೈನ್ನ ಸಂಯೋಜಕ ಸಂಪಾದಕ ಸಂತೋಷ್ ಜಾರ್ಜ್ ಜಾಕೋಬ್ರನ್ನು ಫ್ಯಾಕ್ಟ್ಚೆಕ್ ತಂಡ ಸಂಪರ್ಕಿಸಿದಾಗ ವೈರಲ್ ಸ್ಕ್ರೀನ್ಶಾಟ್ ನಕಲಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಭಾರಿ ವೈರಲ್ ಆಗ್ತಿದೆ ಐಆರ್ಟಿಎಸ್ ಅಧಿಕಾರಿಯ ಲಗ್ನ ಪತ್ರಿಕೆ ಸಂದೇಶ: ನೀವೂ ಫಿದಾ ಆಗೋದು ಗ್ಯಾರೆಂಟಿ!
ಶೋಭಾ ಅವರು ಮಾತನಾಡಿ, ಶಬರಿಮಲೆ ವಿಚಾರದಲ್ಲಿ ನಾನೆಂದಿಗೂ ಆ ರೀತಿಯ ಹೇಳಿಕೆ ನೀಡಿಲ್ಲ. ಮನೋರಮಾ ಸಹ ಈ ಕುರಿತು ಖಚಿತಪಡಿಸಿದ್ದು, ಅದೊಂದು ನಕಲಿ ಸ್ಕ್ರೀನ್ಶಾಟ್ ಎಂದು ಹೇಳಿದೆ. ಈ ಕುರಿತು ಕಾನೂನು ಕ್ರಮ ತೆಗೆದುಕೊಳ್ಳಲು ನಾನು ಒತ್ತಾಯಿಸಿದ್ದೇವೆ ಎಂದು ಶೋಭಾ ತಿಳಿಸಿದ್ದಾರೆ. (ಏಜೆನ್ಸೀಸ್)
ಕುಟ್ಟಾಣಿ ಮಾರುತ್ತಿದ್ದವಳೀಗ ಪೊಲೀಸ್ ಅಧಿಕಾರಿ: ಸ್ಫೂರ್ತಿಯ ಕತೆಗೆ ರೋಚಕ ಟ್ವಿಸ್ಟ್..!